Thursday, April 25, 2024
spot_imgspot_img
spot_imgspot_img

ಅಕ್ಷರ ಸಂತರನ್ನು ಭೇಟಿಯಾದ ವೃಕ್ಷಮಾತೆ..!

- Advertisement -G L Acharya panikkar
- Advertisement -

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಅಂಕೋಲಾ ತಾಲೂಕಿನ ಪರಿಸರ ಪ್ರೇಮಿ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಭೇಟಿಯಾಗಿ ಮಾತುಕತೆ ನಡೆಸಿದರು. ನ್ಯೂಪಡ್ಪುವಿನಲ್ಲಿರುವ ಹಾಜಬ್ಬರ ಮನೆಗೆ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಭೇಟಿ ನೀಡಿದ ತುಳಸಿ ಗೌಡರನ್ನು ಹಾಜಬ್ಬ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭ ಮಾತನಾಡಿದ ಹಾಜಬ್ಬ, ಪದ್ಮಶ್ರೀ ತುಳಸೀ ಗೌಡ ಅವರು ಈ ಬಡವನ ಮನೆಗೆ ಭೇಟಿ ನೀಡಿರುವುದು ನನ್ನ ಪುಣ್ಯ. ದಿಲ್ಲಿಯಲ್ಲಿ ವಿಮಾನ ನಿಲ್ದಾಣದಲ್ಲಿ ವರನ್ನು ಭೇಟಿಯಾದರೂ ಮಾತುಕತೆಗೆ ಸರಿಯಾದ ಅವಕಾಶ ದೊರೆತಿರಲಿಲ್ಲ. ಇದೀಗ ನನ್ನ ಮನೆಗೇ ಈ ಅಮ್ಮ ಬಂದಿರುವುದು ನನ್ನ ಜೀವನದಲ್ಲಿ ದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭ ಮಾತನಾಡಿದ ವೃಕ್ಷ ಮಾತೆ ತುಳಸಿಗೌಡ ಅವರು ಹಾಜಬ್ಬ ಅವರನ್ನು ಭೇಟಿ ಮಾಡಿದ್ದು ಖುಷಿಯಾಗಿದ್ದು, ಇವರ ಕನಸಿಗೆ ಎಲ್ಲರೂ ಸಹಕರಿಸಬೇಕೆಂದರು. ಅಲ್ಲದೆ ಹಾಜಬ್ಬರ ಪಿ.ಯು ಕಾಲೇಜು ತೆರೆಯುವ ಕನಸಿಗೆ ಆರ್ಥಿಕ ಸಹಾಯವನ್ನು ಈ ಸಂದರ್ಭ ನೀಡಿದರು. ನಂತರ ಹಾಜಬ್ಬ ಅವರ ಶಾಲೆಗೂ ಭೇಟಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳು ತುಳಸಿಗೌಡ ಅವರನ್ನುಅದ್ದೂರಿಯಾಗಿ ಸ್ವಾಗತಿಸಿದರು.

- Advertisement -

Related news

error: Content is protected !!