Wednesday, April 17, 2024
spot_imgspot_img
spot_imgspot_img

ಬಂಟ್ವಾಳ: ಉದ್ಯೋಗ ಮಾಡು ಎಂದ ತಂದೆಗೆ ದೊಣ್ಣೆಯಿಂದ ಹೊಡೆದ ಮಗ.!!

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳದ ಬಾಳ್ತಿಲ ಗ್ರಾಮದಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಮಗನಿಗೆ ‘ಉದ್ಯೋಗ ಮಾಡು’ ಎಂದು ಸಲಹೆ ನೀಡಿದ್ದ ತಂದೆಗೆ ಮಗ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣಿಯಿಂದ ಹೊಡೆದ ಘಟನೆ ನಡೆದಿದೆ.

ಗಾಯಗೊಂಡವರು ವಿಶ್ವನಾಥ (56) ಎನ್ನಲಾಗಿದೆ. ಇವರ ಮಗನಾದ ಹಾರ್ದಿಕ್ ಪದವಿ ವಿದ್ಯಾಭ್ಯಾಸ ಮು ಗಿಸಿ ಮನೆಯಲ್ಲಿ ಇದ್ದು, ತಂದೆ ಯಾವುದಾದರೂ ಉದ್ಯೋಗ ಮಾಡು ಎಂದು ಸಲಹೆ ನೀಡಿದ್ದರು.

ಈ ವೇಳೆ ಏಕಾಏಕಿ ಮನೆಯಿಂದ ಹೊರಗೆ ಹೋದವನು ಮತ್ತೆ ಮನೆಗೆ ಬಂದು ದೊಣ್ಣೆ ಹಿಡಿದು ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು, ಎಡಕಾಲಿಗೆ, ಎಡತೋಳಿಗೆ ಹೊಡೆದು ಗಾಯವನ್ನು ಮಾಡಿದ್ದು, ಕೈಯಿಂದ ಬೆನ್ನಿಗೆ ಹೊಡೆದು ಮನೆಯಿಂದ ಹೊರಗೆ ಹೋಗಿದ್ದಾನೆ. ಈ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!