Friday, April 26, 2024
spot_imgspot_img
spot_imgspot_img

ಅನಂತಾಡಿ: ಪ್ರಧಾನಿ ಮೋದಿಯವರಿಗೆ ದೀರ್ಘಾಯುಷ್ಯ ವೃದ್ಧಿಸಲಿ ಎಂದು ಬಿಜೆಪಿ ವತಿಯಿಂದ ಕರಿಂಕ ಶ್ರೀ ದೇವಿಗೆ ಪ್ರಾರ್ಥನೆ

- Advertisement -G L Acharya panikkar
- Advertisement -

ಅನಂತಾಡಿ: ಭಾರತದ ಘನತೆ ಗೌರವಗಳನ್ನು ಜಗತ್ತಿನಾದ್ಯಂತ ಪಸರಿಸಿದ ,ದೇಶದ ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ನೆಟ್ಟ ,ವಿರೋಧಿಗಳು ಅಸೂಯೆ ಪಡುವ ರೀತಿಯಲ್ಲಿ ದೇಶದ ಹಿತ ಕಾಪಾಡಿದ ದೀರೋದ್ದತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಪಂಜಾಬಿನಲ್ಲಿ ವಿರೋಧ ಪಕ್ಷಗಳು ಮತ್ತು ದೇಶವಿರೋಧಿ ಕೂಟ ಪ್ರಯತ್ನ ಪಟ್ಟ ವಿಷಯ ದೇಶವಾಸಿಗಳೆಲ್ಲರಿಗೂ ತಿಳಿದಿದೆ.ಈ ಘಟನೆಯನ್ನು ಖಂಡಿಸಿ ಇದಕ್ಕೆ ದೇಶದಾದ್ಯಂತ ಭಾರಿ ವಿರೋಧವು ವ್ಯಕ್ತವಾಗಿದೆ.

vtv vitla
vtv vitla

ವಿರೋಧಿ ಕೂಟದ ವಕ್ರದೃಷ್ಟಿ ಮೋದಿಜಿಯವರ ಮೇಲೆ ಹಾಗೂ ಕೇಂದ್ರ ಸರಕಾರದ ಮೇಲೆ ಯಾವತ್ತೂ ಬೀಳದಂತೆ,ಸರ್ವ ಸಮರ್ಥ ಪ್ರಧಾನಿಯವರಿಗೆ ದೀರ್ಘಯುಷ್ಯ,ಉತ್ತಮ ಆರೋಗ್ಯ ಹಾಗೂ ಸಕಲ ಶಕ್ತಿಯನ್ನು ದೇವರು ಕರುಣಿಸಬೇಕೆಂದು , ಅನುಗ್ರಹಿಸಬೇಕೆಂದು ಅನಂತಾಡಿ ಗ್ರಾಮದ ಬಿಜೆಪಿ ವತಿಯಿಂದ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಿಯವರಲ್ಲಿ ಪ್ರಾರ್ಥಿಸಲಾಯಿತು.

vtv vitla

ಈ ಸಂದರ್ಭದಲ್ಲಿ ಶ್ರೀಯುತ ಉಗ್ಗಪ್ಪ ಶೆಟ್ಟಿ ಕೊಂಬಿಲ,ಮಹಾಶಕ್ತಿ ಕೇಂದ್ರ ಅದ್ಯಕ್ಷ ಸನತ್ ಕುಮಾರ್ ರೈ,ಸಾಮಾಜಿಕ ಜಾಲತಾಣ ಪ್ರಮುಖ ಶಿವರಾಮ ಶೆಟ್ಟಿ ಕರಿಂಕ,ಉಪಾಧ್ಯಕ್ಷ ಕುಸುಮಾಧರ ಗೌಡ,ರೈತಮೋರ್ಚದ ತನಿಯಪ್ಪ ಗೌಡ, ಬೂತ್ ಅಧ್ಯಕ್ಷ ನಾಗೇಶ್ ಭಂಡಾರಿ ಕರಿಂಕ,ಬೂತ್ ಅಧ್ಯಕ್ಷ ಕುಂಙ್ಞಣ್ಣ ಗೌಡ,ಪಂತಾಯತ್ ಸದಸ್ಯೆ ಶ್ರೀಮತಿ ಮಮಿತಾ ಪೂಜಾರಿ,ನೆಟ್ಲಮುಡ್ನೂರು ಪಂಚಾಯತ್ ಅಧ್ಯಕ್ಷ ಸತೀಶ್ ಕೊಪ್ಪರಿಗೆ.

vtv vitla
vtv vitla

ಪಂಚಾಯತ್ ಸದಸ್ಯ ಅಶೋಕ ರೈ, ಶಕ್ತಿ ಕೇಂದ್ರ ಅಧ್ಯಕ್ಷ ಕಿರಾಣ್ ಪೂಜಾರಿ ಗೋಳಿಕಟ್ಟೆ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ ತಾರಿಪಡ್ಪು,ಹಿಂದುಳಿದ ಮೋರ್ಚ ಸದಸ್ಯ ಮಹಾಬಲ ಪೂಜಾರಿ ಬಾಕಿಲ,ಸೇವಾ ಪ್ರಮುಖ್ ಕೇಶವ ಕಿದೆನಾರ್,ವಿವೇಕ್ ಶೆಟ್ಟಿ,ಉಮೇಶ್ ಬಾಕಿಲ,ಉಮೇಶ್ ಪೂಜಾರಿ ಬಾಕಿಲ, ಪ್ರಶಾಂತ್,ಪ್ರಸಾದ್ ,ಶಿವಕುಮಾರ್ ದೇವಿನಗರ,ಮೋಹನ್ ಕುಲಾಲ್ ಗೋಳಿಕಟ್ಟೆ, ಚೇತನ್ ದೇವಿನಗರ,ಬಾಬು ನಾಯ್ಕ್ ,ದಿನೇಶ್ ಪೂಜಾರಿ ಗೋಳಿಕಟ್ಟೆ,ನೆಟ್ಲಮುಡ್ನೂರು ಪಂಚಾಯತ್ ಸದಸ್ಯ ಧನಂಜಯ ಕುಮಾರ್ ಮುಂತಾದವರು ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮದ ಅನ್ಯನ್ಯ ಜವಬ್ದಾರಿಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!