- Advertisement -
- Advertisement -
ಆಂದ್ರಪ್ರದೇಶ: ಇಲ್ಲಿನ ತಿರುಪತಿಯು ಇನ್ನು ಜಿಲ್ಲಾ ಕೇಂದ್ರವಾಗಲಿದ್ದು ಅದಕ್ಕೆ ಶ್ರೀ ಬಾಲಾಜಿ ಜಿಲ್ಲೆ ಎಂದು ಹೆಸರಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಜನರಲ್ಲಿ ಖುಷಿ ಮನೆ ಮಾಡಿದ್ದರೂ ಬಾಲಾಜಿ ಜಿಲ್ಲೆ ಎಂದು ನಾಮಕರಣ ಮಾಡುವುದಕ್ಕೆ ಅತೃಪ್ತಿ ಸೂಚಿಸಿದ್ದಾರೆ. ಶ್ರೀ ಬಾಲಾಜಿ ಎನ್ನುವ ಹೆಸರು ವಿಶೇಷವಾಗಿ ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಹೆಸರಾಗಿದೆ ಎನ್ನುವುದು ಅವರ ವಾದವಾಗಿದೆ. ‘ಸರಳವಾಗಿ ತಿರುಪತಿ ಎಂದು ಹೆಸರಿಸಿದರೆ ಉತ್ತಮ. ಇಲ್ಲದಿದ್ದರೆ ಶ್ರೀ ವೆಂಕಟೇಶ್ವರ ಅಥವಾ ಶ್ರೀ ಶ್ರೀನಿವಾಸ ಎಂದು ನಾಮಕರಣ ಮಾಡಿ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
- Advertisement -