Friday, May 3, 2024
spot_imgspot_img
spot_imgspot_img

ಆಪರೇಷನ್ ಗಂಗಾ: ಯುದ್ಧ ಭೂಮಿಯಿಂದ ತಾಯ್ನಾಡಿಗೆ ಮರಳಿದ 240 ಮಂದಿ ಭಾರತೀಯರು..!

- Advertisement -G L Acharya panikkar
- Advertisement -
vtv vitla
vtv vitla

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ನೆರೆಯ ದೇಶಗಳ ಮೂಲಕ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯಾಚರಣೆ ಚುರುಕುಪಡೆದುಕೊಂಡಿದೆ. ‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಆರನೇ ವಿಮಾನವು 240 ಭಾರತೀಯರನ್ನು ಕರೆದುಕೊಂಡು ಬುಡಾಪೆಸ್ಟ್‌ನಿಂದ ಹೊರಟಿದೆ.

ಇದರೊಂದಿಗೆ ಸ್ಥಳಾಂತರ ಪ್ರಯತ್ನಗಳು ಚುರುಕುಪಡೆದುಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಐದು ವಿಮಾನಗಳಲ್ಲಿ 1156 ಕ್ಕೂ ಅಧಿಕ ಮಂದಿ ಭಾರತೀಯರು ತವರಿಗೆ ವಾಪಸಾಗಿದ್ದಾರೆ. ಈ ಮಧ್ಯೆ, ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ನೆರವಾಗುವ ಉದ್ದೇಶದಿಂದ ಕೇಂದ್ರದ ಸಚಿವರಾದ ಹರದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ವಿ.ಕೆ. ಸಿಂಗ್ ಅವರು ಉಕ್ರೇನ್ ನೆರೆ ದೇಶಗಳಿಗೆ ತೆರಳಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!