- Advertisement -
- Advertisement -
ಭತ್ತ ಖರೀದಿಸುವ ನೆಪದಲ್ಲಿ ಬಂದು ರೈತರಿಗೆ ಮೋಸ ಮಾಡಲು ಯತ್ನಿಸಿದ ಪ್ರಕರಣ ಆರು ವರ್ಷದ ಬಾಲಕನಿಂದ ಬೆಳಕಿಗೆ ಬಂದ ಘಟನೆ ಮಂಡ್ಯ ತಾಲೂಕಿನ ಕೋಣನಹಳ್ಳಿಯಲ್ಲಿ ನಡೆದಿದೆ.
ಬಾಲಕ ಸೆರೆ ಹಿಡಿದ ವಿಡಿಯೋದಿಂದ ದಲ್ಲಾಳಿಗಳ ಬಣ್ಣ ಬಯಲಾಗಿದೆ. ಭತ್ತ ಖರೀದಿಸಲು ನಾಲ್ವರು ದಲ್ಲಾಳಿಗಳು ಆಗಮಿಸಿದ್ದರು. ಈ ವೇಳೆ 20 ಚೀಲ ತೋರಿಸಿ, 28 ಚೀಲ ಭತ್ತ ತುಂಬಿಕೊಂಡಿದ್ದರು. ಕಡಿಮೆ ಲೆಕ್ಕ ತೋರಿಸಿ ಜಾಸ್ತಿ ಚೀಲ ಭತ್ತ ತುಂಬಿಕೊಂಡು ರೈತರಿಗೆ ಯಾಮಾರಿಸುತ್ತಿದ್ದರು.
ರೈತರಿಗೆ ಮೋಸ ಮಾಡಲು ಮುಂದಾಗಿದ್ದ ದಲ್ಲಾಳಿಗಳ ಕಳ್ಳತನ ದೃಶ್ಯಗಳನ್ನ ಆರು ವರ್ಷದ ಬಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದ. ಬಾಲಕ ಮಾಡಿದ ವಿಡಿಯೋದಿಂದ ದಲ್ಲಾಳಿಗಳ ನಿಜಾಬಣ್ಣ ಬಯಲಾಗಿದೆ. ರೈತರು ಎಚ್ಚೆತ್ತುಕೊಳ್ಳುತ್ತಿದ್ದಂತೆ ಅವರು ಪರಾರಿಯಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಕ್ಯಾಂಟರ್ ಮಾಲೀಕ ನಮ್ಮವರು ತಪ್ಪು ಮಾಡಿದ್ದಾರೆ ಎಂದು ಕಣ್ಣೀರು ಹಾಕಿ ಹೈಡ್ರಾಮ ಮಾಡಿದ್ದಾರೆ. ರೈತರಿಗೆ ಮೋಸ ಮಾಡಲು ಮುಂದಾಗಿದ್ದ ದಲ್ಲಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರೈತರು ಒತ್ತಾಯಿಸಿದ್ದಾರೆ.
- Advertisement -