Friday, May 3, 2024
spot_imgspot_img
spot_imgspot_img

ಆಸ್ತಿ ವಿಚಾರಕ್ಕೆ ದಂಪತಿಗೆ ಕೊಲೆ ಬೆದರಿಕೆ: ಮತ್ತು ಹಲ್ಲೆ

- Advertisement -G L Acharya panikkar
- Advertisement -

ಕಾರ್ಕಳ: ಆಸ್ತಿ ವಿಚಾರಕ್ಕೆ ಮಗ ಮತ್ತು ಸೊಸೆ ಸೇರಿಕೊಂಡು ತಂದೆಯ ಮೇಲೆ ಹಲ್ಲೆ ನಡೆಸಿದ ಘಟನೆ ಮಿಯ್ಯಾರ್‍ ತಾಲೂಕು ಎಂಬಲ್ಲಿ ನಡೆದಿದೆ. ಬಾಲಕೃಷ್ಣ ಶಕುಂತಲಾರವರು ಹಲ್ಲೆಗೊಳಗಾದ ದಂಪತಿ.

ಬಾಲಕೃಷ್ಣರವರ ಮೊದಲ ಹೆಂಡತಿಯ ಮಗ ನಿತೇಶ್ ಕುಮಾರ್ ತನ್ನ ಹೆಂಡತಿ ದೀಪಾ ಮತ್ತು ರೋಶನ್ ಎಂಬವರೊಂದಿಗೆ ಆಗಾಗ ಬಂದು ಆಸ್ತಿಯಲ್ಲಿ ಪಾಲು ಕೊಡುವಂತೆ ಅವಾಚ್ಯ ಶಬ್ದಗಳಿಂದ ಬೈದು, ತಕರಾರು ಮಾಡುತ್ತಿದ್ದರು. ನೀವು ಆಸ್ತಿಯನ್ನು ನಮಗೆ ಬಿಟ್ಟುಕೊಡದಿದ್ದರೆ ನಿಮ್ಮಿಬ್ಬರನ್ನು ಕೊಂದು ಹಾಕುತ್ತೇವೆ ಎಂದು ಹೇಳಿದ್ದಲ್ಲದೇ ಬಾಲಕೃಷ್ಣ ಹಾಗೂ ಶಕುಂತಲಾರವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!