ಇಬ್ಬರು ಪತ್ನಿಯರನ್ನು ಮ್ಯಾನೇಜ್ ಮಾಡುತ್ತಿದ್ದ ಕಾನ್ಸ್ಟೇಬಲ್ ನ ಬರ್ಬರ ಹತ್ಯೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ. ಡಿಆರ್ ಪೊಲೀಸ್ ಕಾನ್ಸ್ಟೇಬಲ್ ಜಾಫರ್ ಹತ್ಯೆಯಾದ ವ್ಯಕ್ತಿ.
ಜಾಫರ್ ಸಹೀಬ್ ಹಿಂದೂ ಯುವತಿ ಹನುಮಕ್ಕಳನ್ನು ಮದುವೆ ಆಗುವುದಕ್ಕೂ ಮೊದಲು ಇನ್ನೊಬ್ಬ ಮುಸ್ಲಿಂ ಮಹಿಳೆ ನವೀನ್ ತಾಜ್ ಜೊತೆ ಮದುವೆಯಾಗಿದ್ದ. ನವೀನ್ ತಾಜ್ ಈ ಹಿಂದೆ ಗರ್ಭಿಣಿಯಾಗಿದ್ದಾಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಓಡಾಡುತ್ತಿದ್ದ ವೇಳೆ ಅಲ್ಲಿದ್ದ ನರ್ಸ್ ಹನುಮಕ್ಕನ ಜೊತೆ ಪ್ರೇಮವಾಗಿತ್ತು. ಈ ವಿಚಾರ ಮೊದಲ ಪತ್ನಿ ನವೀನ್ ತಾಜ್ಗೆ ಗೊತ್ತಾಗಿ ಆಕೆ ಜಾಫರ್ನ ಬಿಟ್ಟು ತವರು ಸೇರಿದ್ದಳು.
ಅದೇ ವೇಳೆ ಹನುಮಕ್ಕನ ಜೊತೆ ಜಾಫರ್ ಮದುವೆಯಾಗಿದ್ದು, ಇಲ್ಲಿಗೆ 4 ವರ್ಷ ಕಳೆದಿದೆ. ಆದರೆ ಈ ನಡುವೆ ಜಾಫರ್ ಮತ್ತೆ ತನ್ನ ಮೊದಲ ಪತ್ನಿ ಮನೆಗೆ ಓಡಾಟ ಶುರು ಮಾಡಿದ್ದಕ್ಕೆ ಹನುಮಕ್ಕ ಕೋಪಗೊಂಡು ಆತನ ಹತ್ಯೆ ಮಾಡಿದ್ದಾಳೆ. ತಕ್ಷಣ ಅಕ್ಕಪಕ್ಕದ ಪೊಲೀಸ್ ಸಿಬ್ಬಂದಿ ಜಾಫರ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಜಾಫರ್ ನ ಉಸಿರು ನಿಂತು ಹೋಗಿತ್ತು.
ಆದರೆ ಜಾಫರ್ನ ಸಂಬಂಧಿಕರು ಆತನ ಪತ್ನಿ ಹನುಮಕ್ಕಳೇ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ್ದಾರೆ. ಇದೊಂದು ಪ್ರೀ ಪ್ಲಾನ್ ಮರ್ಡರ್. ಜಾಫರ್ ಪತ್ನಿ ಹನುಮಕ್ಕ ಎಂದು ಅನುಮಾನಿಸಿ ಪೊಲೀಸರು ಹನುಮಕ್ಕಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
ಜಾಫರ್ಗೆ ಮತ್ತು ಬರುವ ಚುಚ್ಚು ಮದ್ದು ನೀಡಿ, ಆತನಿಗೆ ಪ್ರಜ್ಞೆ ತಪ್ಪಿಸಿ ಬಳಿಕ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.