Friday, June 27, 2025
spot_imgspot_img
spot_imgspot_img

ಉಡುಪಿ: ಚರಂಡಿಗೆ ಬಿದ್ದ ಬೈಕ್‌; ವಿದ್ಯಾರ್ಥಿ ಸಾವು

- Advertisement -
- Advertisement -

ಉಡುಪಿ: ಅಂಬಲಪಾಡಿ ಕಿನ್ನಿಮೂಲ್ಕಿ ರಾ.ಹೆ. 66ರ ಸರ್ವಿಸ್‌ ರಸ್ತೆಯಲ್ಲಿ ಬೈಕ್‌ ಒಂದು ಚರಂಡಿಗೆ ಬಿದ್ದು ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.

ಮಲ್ಪೆ ಕೊಡವೂರು ನಿವಾಸಿ, ಮಣಿಪಾಲದ ಕಾಲೇಜಿನ ವಿದ್ಯಾರ್ಥಿ ಲಿಯಾನ್‌ ವಿಲ್ಸನ್‌ (19) ಮೃತಪಟ್ಟ ದುರ್ದೈವಿ.

ಸರ್ವಿಸ್‌ ರಸ್ತೆಯಲ್ಲಿ ಅಂಬಲಪಾಡಿಯಿಂದ ಕಿನ್ನಿಮೂಲ್ಕಿ ಕಡೆಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಸವಾರ ಬೈಕ್‌ ಸಮೇತ ಚರಂಡಿಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!