Sunday, May 5, 2024
spot_imgspot_img
spot_imgspot_img

ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಶಾಕ್; ಕೂಲಿಕಾರ್ಮಿಕ ಸ್ಥಳದಲ್ಲೇ ಮೃತ್ಯು

- Advertisement -G L Acharya panikkar
- Advertisement -

ಉಡುಪಿ : ಪಡುಬಿದ್ರೆಯ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಭವ್ಯ ಪೆಟ್ರೋಲ್ ಬಂಕ್‌ನ ವಿದ್ಯುತ್ ಕಾಮಗಾರಿ ಸಂದರ್ಭ 19 ವರ್ಷದ ಲಿಂಗರಾಜು ಎಂಬಾತನಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.

ಪೆಟ್ರೋಲ್ ಬಂಕ್‌ನ ಅರ್ಥಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು , ಪಿಕ್ಕಾಸಿನಿಂದ ಅಗೆಯುತ್ತಿದ್ದ ಸಂದರ್ಭ ಶಾಕ್ ತಗುಲಿದೆ. ಗುತ್ತಿಗೆ ಕಾಮಗಾರಿಗೆ ಲಿಂಗರಾಜು, ಮಂಗಳಪ್ಪ, ಎಲ್ಲಪ್ಪ ಹಾಗೂ ಕಿರಣ್ ಅವರು ಬಂದಿದ್ದು, ಲಿಂಗರಾಜು ಶಾಕ್ ತಗುಲಿ ಮೃತಪಟ್ಟರೆ, ಮಂಗಳಪ್ಪನವರಿಗೂ ಶಾಕ್ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಪು ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ , ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!