- Advertisement -
- Advertisement -
ಉಪ್ಪಿನಂಗಡಿ: ಕಳೆದ ಆದಿತ್ಯವಾರ ಮಧ್ಯರಾತ್ರಿ ನಾಪತ್ತೆಯಾಗಿದ್ದ ಬಾರ್ಯ ಗ್ರಾಮದ ಯುವತಿ ಸಾಹಿದಾ (19 ವ.) ಎಂಬಾಕೆಯನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.
ಮಂಗಳೂರು ತಾಲೂಕು ಮುಡಿಪು ಎಂಬಲ್ಲಿನ ಶಕೀನಾ ಎಂಬವರ ಮನೆಯಲ್ಲಿ ಇದ್ದ ಈಕೆಯನ್ನು ಉಪ್ಪಿನಂಗಡಿಯ ಮಹಿಳಾ ಎಎಸೈ ಕವಿತಾರವರು ಪತ್ತೆ ಹಚ್ಚಿ ಆಕೆಯ ತಂದೆಯ ಜೊತೆ ಕಳುಹಿಸಿಕೊಟ್ಟಿದ್ದಾರೆ.
ಆಕೆಯನ್ನು ಕರೆದುಕೊಂಡು ಹೋಗಿದ್ದನೆಂದು ಸಂಶಯಿಸಲಾದ ಮುದಾಸೀರ್ ಎಂಬಾತನಿಗೆ ಪೊಲೀಸ್ ಠಾಣೆಯ ಬಳಿ ಯುವತಿಯ ಕಡೆಯವರೆನ್ನಲಾದ ಗುಂಪೊಂದು ಹಲ್ಲೆಗೆ ಮುಂದಾಗಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.ಆದರೆ ಪೊಲೀಸರ ಸಕಾಲಿಕ ಕ್ರಮದಿಂದಾಗಿ ಪರಿಸ್ಥಿತಿ ನಿಯಂತ್ರಿಸಲಾಯಿತು.
- Advertisement -