Friday, April 19, 2024
spot_imgspot_img
spot_imgspot_img

ಉಪ್ಪಿನಂಗಡಿ: ಮುಂದುವರಿದ ಹಿಜಾಬ್ ವಿವಾದ; ಇತ್ಯಾರ್ಥವಾಗುವವರೆಗೆ ತರಗತಿಗೆ ತೆರಳುವುದಿಲ್ಲ ಎಂದು ಪ್ರತಿಭಟನೆ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಕೆಲ ದಿನಗಳಿಂದ ಸದ್ದು ಮಾಡುತ್ತಿರುವ ಉಪ್ಪಿನಂಗಡಿ ಕಾಲೇಜಿನ ಹಿಜಾಬ್ ವಿವಾದವೂ ಇಂದು ಕೂಡ ಮುಂದುವರೆದಿದ್ದು, ಕೆಲ ವಿದ್ಯಾರ್ಥಿನಿಯರು ಇಂದು ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆ ಕಾಲೇಜಿನ ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ವಿವಾದ ಇತ್ಯಾರ್ಥವಾಗುವ ವರೆಗೆ ತರಗತಿಗೆ ತೆರಳುವುದಿಲ್ಲ ಎಂದು ತರಗತಿ ಹೊರಗಡೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಕಳೆದ ಕೆಲ ದಿನಗಳಿಂದ ಹಿಜಾಬ್ ವಿವಾದ ಸದ್ದು ಮಾಡುತ್ತಿದ್ದು, ಹಿಜಾಬ್ ಧರಿಸಿ ಬರುತ್ತಿದ್ದ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದು, ಆದರೂ ನಿಲ್ಲದ ವಿವಾದ ಮತ್ತೆ ಮುಂದುವರೆದಿದೆ. ನಿನ್ನ ಕಾಲೇಜಿಗೆ ವರದಿಗೆಂದು ತೆರಳಿದ ಮಾಧ್ಯಮದವರ ಮೇಲೂ ಹಿಜಾಬ್ ಪರವಾದ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಈ ಹಿನ್ನೆಲೆ ಸರಿಯಾದ ತನಿಖೆ ನಡೆಸಿ ಈ ವಿವಾದಗಳನ್ನು ಅಂತ್ಯ ಮಾಡುವಂತೆ ಆಗ್ರಹಿಸಿ ಇತರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ : ಮಾಧ್ಯಮ ಪ್ರತಿನಿಧಿಗಳ ಮೇಲೆ ಮುಸ್ಲಿಂ ವಿದ್ಯಾರ್ಥಿಗಳ ಗೂಂಡಾಗಿರಿ

- Advertisement -

Related news

error: Content is protected !!