Friday, May 3, 2024
spot_imgspot_img
spot_imgspot_img

ಉಳ್ಳಾಲ: ಬಿಜೆಪಿ ಕಾರ್ಯಕತನ ಮೇಲೆ ಹಲ್ಲೆಗೆ ಯತ್ನ..!?? ಕಮಿಷನರ್ ವಿಚಾರಣೆ ವೇಳೆ ನಿಜಾಂಶ ಬಯಲು

- Advertisement -G L Acharya panikkar
- Advertisement -

ಉಳ್ಳಾಲ: ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನ ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆಗೆ ಒಂದೊಂದೇ ತಿರುವು ಸಿಗುತ್ತಿದೆ. ಘಟನೆಯ ಕುರಿತಂತೆ ಮಾಧ್ಯಮಕ್ಕೆ ಹಲ್ಲೆಗೊಳಗಾದ ಕಿಶೋರ್ ಸಾಲ್ಯಾನ್ ಎಂಬವರ ಮಗ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾಗಿ ತಿಳಿಸಿದ್ದಾನೆ. ಆದ್ರೆ ಘಟನಾ ಸ್ಥಳಕ್ಕೆ ಕಮಿಷನರ್‍ ಶಶಿಕುಮಾರ್ ಆಗಮಿಸಿ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ.

ಈ ಬಗ್ಗೆ ಪೊಲೀಸ್‌ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ತೆರಳಿದ್ದು ಘಟನೆಯ ಕುರಿತಂತೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಕೂಡಲೇ ಪೊಲೀಸ್‌ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ತೆರಳಿದ್ದು ದೂರು ಕೊಟ್ಟ ಕಾರ್ಯಕರ್ತನನ್ನೇ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಮಿಷನರ್, ಹಾಗೇನೂ ಆಗಿಲ್ಲ. ಆತನನ್ನು ವಿಚಾರಿಸಿದ್ದು ಯಾರೋ ಅಟ್ಟಿಸಿಕೊಂಡು ಬಂದಂತೆ ಕಂಡಿತ್ತು. ಹಾಗಾಗಿ ಭಯದಿಂದ ಓಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾನೆ. ನಾವು ದೂರು ಕೊಟ್ಟವನ ವಿರುದ್ಧ ಏಕ್ಷನ್ ತಗೋತೇವೆ ಎಂದಿದ್ದಾರೆ.

ಯಾವುದೇ ದಾಳಿ ನಡೆದಿಲ್ಲ: ಶಶಿಕುಮಾರ್
ವಿಚಾರಣೆ ವೇಳೆ ನನ್ನ ಮೇಲೂ ದಾಳಿಯಾಗಬಹುದು ಎಂದು ಕಲ್ಪಿಸಿ ದಾಳಿ ಯತ್ನದ ಬಗ್ಗೆ ಹೇಳಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ವದಂತಿ ಹಬ್ಬಿಸಿದವನ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾಕಾಗಿ ಈ ರೀತಿಯ ಮಾಹಿತಿ ನೀಡದ್ರು?
ಮೂಲಗಳ ಪ್ರಕಾರ ಕಿಶೋರ್‍ ಸಾಲ್ಯಾನ್ ಎಂಬವರ ಮಗ ಈ ರೀತಿಯಾಗಿ ಮಾರಕಾಸ್ತ್ರಗಳ ಮೇಲೆ ಹಲ್ಲೆ ನಡೆಸಲು ಯತ್ನ ನಡೆದಿದೆ ಎಂದಿದ್ದಾನೆ. ಆದ್ರೆ ಯಾಕಾಗಿ ಆತ ಈ ರೀತಿಯಾಗಿ ಹೇಳಿಕೆ ನೀಡಿದ್ದಾನೆ ಎಂಬುವುದು ತಿಳಿದುಬಂದಿಲ್ಲ.

- Advertisement -

Related news

error: Content is protected !!