ಪುತ್ತೂರು: ಜಿಲ್ಲಾ ಮಟ್ಟದ ಘೋಷಣಾ ಸಮಾವೇಶ ಟೋಪಿಸ್ಟ್-21 ಲೀಡರ್ಸ್ ಮೀಟ್ ಉಮರ್ ಹಾಜಿ ಕಾಂಪೌಂಡ್ ಬನ್ನೂರಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕ್ಕರ್ ಸಅದಿ ಮಜೂರ್ ಅಧ್ಯಕ್ಷರು ಎಸ್ ವೈ ಎಸ್ ದಕ ಈಸ್ಟ್ ಸಮಿತಿ ಪುತ್ತೂರು ಇವರು ವಹಿಸಿದರು.
ಕಾರ್ಯಕ್ರಮವನ್ನು ಸಮಿತಿ ಉಪಾಧ್ಯಕ್ಷರಾದ ಅಬ್ದುಸಲಾಂ ತಂಙಳ್ ಅವರ ದುಆಃದೊಂದಿಗೆ ಪ್ರಾರಂಭಿಸಲಾಯಿತು. ಅಲ್ ಹಾಜ್ ಜಿಎಮ್ ಎಮ್ ಕಾಮಿಲ್ ಸಖಾಫಿ ಪೆರ್ನೆ ಅಧ್ಯಕ್ಷರು ಎಸ್ ವೈ ಎಸ್ ಸಾಂತ್ವನ ವಿಭಾಗ ರಾಜ್ಯ ಸಮಿತಿ ಕರ್ನಾಟಕ ಇವರು ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ಸಮಿತಿ ಕಾರ್ಯದರ್ಶಿಗಳಾದ ಎಮ್ ಬಿ ಎಮ್ ಸ್ವಾದಿಖ್ ಮಾಸ್ಟರ್ ಅವರು ಮುನ್ನುಡಿಯಾಗಿ ಮಾತನಾಡಿ ಜಿಲ್ಲಾ ಸಮಾವೇಶದ ಅಂಗವಾಗಿ ನಡೆಯುವ ನಾಯಕತ್ವ ತರೆಬೇತಿ ಟೀಮ್ 60 ಕ್ಯಾಂಪ್ ಬಗ್ಗೆ ಹಾಗೂ ಕುಂಬ್ರದಲ್ಲಿ ನಡೆಯುವ ಜಿಲ್ಲಾ ಸಮಾವೇಶದ ಬಗ್ಗೆ ವಿವರಣೆಯನ್ನು ನೀಡಿದರು.
ನಾಯಕರಲ್ಲಿ ಇರಬೇಕಾದ ಗುಣಗಳ ಬಗ್ಗೆ ಹಾಗೂ ಸಂಘಟನೆಯನ್ನು ಸಬಲೀಕರಣಗೊಲಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಕೇರಳ ಮುಸ್ಲಿಂ ಜಮಾಆತ್ , ಕಾಸರಗೋಡ್ ಜಿಲ್ಲಾ ಸಮಿತಿ ಪ್ರದಾನ ಕಾರ್ಯದರ್ಶಿ ಸುಲೈಮಾನ್ ಕರಿವಳ್ಳೂರು ಅವರು ತರಗತಿಯನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಸೆಯ್ಯಿದ್ ಎಸ್ ಎಮ್ ತಂಙಳ್ ಉಜಿರೆ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್ ಎಮ್ ಹೆ್ಚ್ ಖಾದರ್ ಹಾಜಿ ಉಪ್ಪಿನಂಗಡಿ,ಇಕ್ಬಾಲ್ ಬಪ್ಪಳಿಗೆ ,ಇಸ್ಮಾಯಿಲ್ ಹಾಜಿ ಬನ್ನೂರು, ಉಪಸ್ಥಿತಿಯಿದ್ದರು. ಸಮಿತಿ ಕೋಶಾಧಿಕಾರಿ ಹಾಜಿ ಅಬ್ದುಲ್ ಕರೀಂ ಚೆನ್ನಾರ್ ಶುಭ ಹಾರೈಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕಾಸಿಂ ಪದ್ಮುಂಜ ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲ ಮುಸ್ಲಿಯಾರ್ ಬನ್ನೂರು ಧನ್ಯವಾದಗೈದರು.
ಕಾರ್ಯಮವನ್ನು ಮೀಡಿಯಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಹಾಗೂ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳರವರು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಬನ್ನೂರು ಎಸ್ ವೈ ಎಸ್ ಬ್ರಾಂಚ್ ಮತ್ತು ಎಸ್ ಎಸ್ ಎಫ್ ಯೂನಿಟ್ ಕಾರ್ಯಕರ್ತರು ಸಹಕರಿಸಿದರು.