- Advertisement -
- Advertisement -
ಪಶ್ಚಿಮ ವಲಯ ಐಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ವರ್ಗಾವಣೆಯಾಗಿದ್ದಾರೆ. ಮಾನವ ಹಕ್ಕು ವಿಭಾಗದ ಐಜಿಪಿಯಾಗಿ ಖಾಲಿ ಇದ್ದ ಹುದ್ದೆಗೆ ದೇವಜ್ಯೋತಿ ರೇ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಚಂದ್ರಗುಪ್ತರನ್ನು ಪಶ್ಚಿಮ ವಲಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ರಾಜ್ಯದ 11 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸೋಮವಾರ ಸಂಜೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ
ಕೆಲವೇ ಮಂದಿ ಪ್ರಾಮಾಣಿಕ ಪೋಲಿಸ್ ಉನ್ನತಾಧಿಕಾರಿಗಳಲ್ಲಿ ದೇವಜ್ಯೋತಿ ರೇ ಒಬ್ಬರಾಗಿದ್ದು, ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ಆ ಮೂಲಕ ಜನಸೇವೆ ಮಾಡುವ ಕಾರ್ಯದಲ್ಲಿ ತೃಪ್ತಿ ಕಂಡ ನಿಷ್ಠಾವಂತ ಅಧಿಕಾರಿಯಾಗಿದ್ದಾರೆ.
- Advertisement -