- Advertisement -
- Advertisement -
ಕಡಬ: ಕಾಡಾನೆ ಹಿಂಡು ದಾಳಿ ಮಾಡಿ ಅಡಿಕೆ ತೋಟ, ಜೇನು ಕೃಷಿ ಸಹಿತ ಒಂದು ಸ್ಕೂಟರ್ ಧ್ವಂಸ ಮಾಡಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಭಾಗದಲ್ಲಿ ನಡೆದಿದೆ.
ಲಕ್ಷ್ಮಣ ಪೆತ್ತಲಾ, ಸುಂದರ ಬಲ್ಲೆರಿ ಎಂಬವರ ಸುಮಾರು 25 ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶಮಾಡಿವೆ. ಜಯಪ್ರಕಾಶ್ ಪೆತ್ತಲ ಎಂಬವರ ಜೇನುನೊಣ ಸಹಿತ 14 ಜೇನುಪೆಟ್ಟಿಗೆಗಳು ಸಂಪೂರ್ಣವಾಗಿ ಹಾಳು ಮಾಡಿದೆ. ಕಿಶೋರ್ ಪಾದೆ ಎಂಬವರ ಸ್ಕೂಟರನ್ನೂ ಕೂಡಾ ಕಾಡಾನೆ ದ್ವಂಸ ಮಾಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -