- Advertisement -
- Advertisement -
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಸಿವಿಲ್ ಪಿಎಸ್ಐ ಪರೀಕ್ಷೆಯಲ್ಲಿ ರೆಂಜಿಲಾಡಿ ಗ್ರಾಮದ ಪಟ್ಟೆ ಕುಮಾರ್ ಜನಾರ್ದನ ಅವರ ಪುತ್ರಿ ವರ್ಷಿತಾ ಪಿ.ಕೆ. ಅವರು ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ರಾಜ್ಯದಲ್ಲಿ 85ನೇ ರ್ಯಾಂಕ್ ಪಡೆದು ಪಿ.ಎಸ್.ಐ.ಹುದ್ದೆಗೆ ಆಯ್ಕೆಯಾಗಿದ್ದಾರೆ.
ವರ್ಷಿತಾ ಪಿ.ಕೆ.ಅವರು ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ, ಎಸ್.ಡಿ.ಎಂ.ಉಜಿರೆ, ಹಾಗೂ ಮಂಗಳೂರು ಪಿಷರಿಷಸ್ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರು ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಪಟ್ಟೆ ಕುಮಾರ್ ಜನಾರ್ದನ ಹಾಗೂ ಬಿಳಿನೆಲೆ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಪ್ರೇಮ ಕುಮಾರ್ ಅವರ ಪುತ್ರಿ.
- Advertisement -