Wednesday, May 8, 2024
spot_imgspot_img
spot_imgspot_img

ಕಡಬ: ಮನೆಗೆ ನುಗ್ಗಿದ ಕಳ್ಳರು ಚಿನ್ನ ಮತ್ತು ಹಣ ದೋಚಿ ಪರಾರಿ.!

- Advertisement -G L Acharya panikkar
- Advertisement -

ಕಡಬ: ಎಡಮಂಗಲ ರೈಲ್ವೆ ಗೇಟ್ ಬಳಿಯಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ ಮತ್ತು ಹಣ ದೋಚಿ ಪಕ್ಕದ ಅಂಗಡಿಯೊoದರ ಬಾಗಿಲು ಮುರಿದು ಪರಾರಿಯಾದ ಘಟನೆ ನಡೆದಿದೆ.

ಎಡಮಂಗಲ ರೈಲ್ವೆ ಗೇಟ್ ಬಳಿಯ ನಿವಾಸಿ ಜಗದೀಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬಾಗಿಲು ಮುರಿದು ಮನೆಯ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನ, ನಗದು ಕೊಂಡೊಯ್ದು ದಾಖಲೆಗಳನ್ನು ರಸ್ತೆಯಲ್ಲಿ ಬಿಸಾಡಿ ಹೋಗಿರುವುದಾಗಿ ತಿಳಿದುಬಂದಿದೆ.

ಬಳಿಕ ಜಗದೀಶ್ ಎಂಬವರ ಅಂಗಡಿಯ ಶೆಟರ್ ಮುರಿದು ಹಣಕ್ಕಾಗಿ ಹುಡುಕಾಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!