- Advertisement -
- Advertisement -
ಕಡಬ: ಉದನೆ ಸಮೀಪದ ನೇಲ್ಯಡ್ಕ ಸರ್ಕಾರಿ ಶಾಲೆಯ ಪರಿಸರದಲ್ಲಿ ಶೆಟ್ರಂಗಡಿ ಎಂದೇ ಪರಿಚಿತರಾಗಿದ್ದ ಸ್ಟೇಷನರಿ ಅಂಗಡಿಯ ಮಾಲೀಕ ವಿಶ್ವನಾಥ ಶೆಟ್ಟಿ ಅಂಗಡಿಯ ಒಳಗೆ ಶವವಾಗಿ ಪತ್ತೆಯಾಗಿದ್ದಾರೆ.
ಕೆಲ ದಿನಗಳಿಂದ ಅಂಗಡಿಗೆ ತೆರೆದಿರಲಿಲ್ಲ. ಇಂದು ಅಂಗಡಿಯ ಒಳಗಿನಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು ಒಳಗೆ ಹೋಗಿ ನೋಡಿದಾಗ ವಿಶ್ವನಾಥ ಶೆಟ್ಟಿಯವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಅರೋಗ್ಯ ಸಮಸ್ಯೆಯಿಂದ ಕುಸಿದು ಬಿದ್ದು ಸಾವನ್ನಪ್ಪಿರುವಂತೆ ಕಂಡು ಬಂದರೂ, ಪೋಲೀಸರ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಮೂಲತಃ ನೆಲ್ಯಾಡಿ ಸಮೀಪದ ಅರ್ಲ ನಿವಾಸಿಯಾಗಿದ್ದ ವಿಶ್ವನಾಥ ಶೆಟ್ಟಿ ಹಲವು ದಶಕಗಳಿಂದ ಶಾಲೆಯ ಹತ್ತಿರ ಸ್ಟೇಷನರಿ ಮತ್ತು ಮಿನಿ ಕ್ಯಾಂಟೀನ್ ನಡೆಸುತ್ತಿದ್ದರು. ಕೆಲ ವರ್ಷಗಳವರೆಗೆ ಪತ್ನಿಯೊಂದಿಗೆ ಅಂಗಡಿ ನಿರ್ವಹಿಸುತ್ತಿದ್ದ ಇವರು, ನಂತರ ಒಬ್ಬರೆ ಅಂಗಡಿಯಲ್ಲಿ ಇರುತ್ತಿದ್ದರು.
- Advertisement -