- Advertisement -
- Advertisement -
ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಆನೆಮಾರು ಎಂಬಲ್ಲಿ ಶತಮಾನಗಳ ಕಾಲ ನಿಸ್ತೇಜವಾಗಿದ್ದ ಶ್ರೀ ಮಲರಾಯಿ ಪಿಲಿಚಾಮುಂಡಿ ದೈವಸ್ಥಾನವನ್ನು ಭಕ್ತ ಜನರ ಸಹಕಾರದಿಂದ ಪುನರ್ನಿಮಿಸಲಾಗಿದೆ.
ಆನೆಮಾರು ಶ್ರೀ ಮಲರಾಯಿ ಪಿಲಿಚಾಮುಂಡಿ ದೈವಸ್ಥಾನ ಕುಡ್ಪಲ್ತಡ್ಕ ಕರೋಪಾಡಿ ಇಲ್ಲಿ ಶ್ರೀ ವೇದಮೂರ್ತಿ ಕುಂಟುಕುಡೇಲು ಗುರುರಾಜ ತಂತ್ರಿಗಳವರಿಂದ ನಾಗ ಪ್ರತಿಷ್ಠೆ – ಬ್ರಹ್ಮಕಲಶಾಭಿಷೇಕ, ನೂತನ ನಿರ್ಮಿತ ದೈವಗಳ ಗರ್ಭಗುಡಿ ಪ್ರವೇಶೋತ್ಸವ ಹಾಗೂ ನೂತನ ತೂಗುಯ್ಯಾಲೆಯಲ್ಲಿ ದೈವಗಳ ಪ್ರತಿಷ್ಠಾ ಕಲಶಾಭಿಷೇಕ, ಗುಳಿಗ- ಕೊರತಿ ಶಿಲಾಬಿಂಬ ಪ್ರತಿಷ್ಠೆಯು ಜ.27ರ ಗುರುವಾರದಂದು ನಡೆಯಲಿದೆ. ಬಳಿಕ ಸಭಾಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಹೊರೆ ಕಾಣಿಕೆ ಮೆರವಣಿಗೆಯು ಜ. 26ನೇ ಬುಧವಾರ ಮಧ್ಯಾಹ್ನ ಗಂಟೆ 2ಕ್ಕೆ ಸರಿಯಾಗಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸೇರಿ ನಂತರ ವಗೆನಾಡು-ಕುಡ್ಪಲ್ತಡ್ಕದ ಮೂಲಕ ಆನೆಮಾರು ದೈವಸ್ಥಾನಕ್ಕೆ ತಲುಪಲಿದೆ.
- Advertisement -