Sunday, May 5, 2024
spot_imgspot_img
spot_imgspot_img

ಕರ್ತವ್ಯನಿರತ ಕಾನ್​ಸ್ಟೇಬಲ್ ಮೇಲೆ ಕುಡುಕರಿಂದ ಹಲ್ಲೆ; ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

- Advertisement -G L Acharya panikkar
- Advertisement -

ಕೋಲಾರ: ಕರ್ತವ್ಯನಿರತ ಕಾನ್​ಸ್ಟೇಬಲ್ ಮೇಲೆ ಕುಡುಕರಿಂದ ಹಲ್ಲೆ ನಡೆದ ಘಟನೆ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ನಡೆದಿದೆ. ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಕುಡುಕರು ಹಲ್ಲೆ ನಡೆಸಿದ್ದಾರೆ. ಪೊಲೀಸ್ ಕಾನ್​ಸ್ಟೇಬಲ್ ಶಂಕರ್ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.

ಶಂಕರ್, ಕೋಲಾರ ಗ್ರಾಮಾಂತರ ಠಾಣೆಯ ಕಾನ್​ಸ್ಟೇಬಲ್ ಆಗಿದ್ದಾರೆ. ವಿಭೂತಿಪುರದ ಮಂಜುನಾಥ್, ಶ್ರೀನಿವಾಸ್​ ಸೇರಿ ನಾಲ್ವರ ವಿರುದ್ಧ ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಂಜುನಾಥ್​, ಶ್ರೀನಿವಾಸ್​ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!