Saturday, May 18, 2024
spot_imgspot_img
spot_imgspot_img

ಕಲ್ಲಡ್ಕ: ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ಚಂಡಿಕಾಯಾಗ

- Advertisement -G L Acharya panikkar
- Advertisement -

ಕಲ್ಲಡ್ಕ: ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರತಿ ವರ್ಷದಂತೆ ನಡೆಯುವ ಚಂಡಿಕಾಯಾಗ ಈ ವರ್ಷವೂ ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಹಾಗೂ ಸರ್ವ ಭಕ್ತರ ಸಮ್ಮುಖದಲ್ಲಿ ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ನಡೆಯಿತು.

ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಚಂಡಿಕಾಯಾಗ ಅಡು ಮರೋಳಿ ಶ್ರೀ ಮಾರಿಕಾಂಬ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರವಿ ಶಾಂತಿ ಮತ್ತು ಅರ್ಚಕ ವೃಂದದವರಿಂದ ನಡೆಯಿತು.

ಚಂಡಿಕಾಯಾಗದ ಪೂರ್ಣಾಹುತಿ ಮದ್ಯಾಹ್ನ 12:30ಕ್ಕೆ ನಡೆದು, ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಶಂಕರ ನಾರಾಯಣ ದುರ್ಗಾಂಬ ಯಕ್ಷಗಾನ ಕಲಾ ತಂಡ ನಂದಾವರ – ಪಾಣೆ ಮಂಗಳೂರು ಇವರಿಂದ ಕದಂಬ ಕೌಶಿಕೆ ಎಂಬ ಪುಣ್ಯಕಥೆಯ ಕಾಲಮಿತಿ ಯಕ್ಷಗಾನ ನಡೆಯಿತು.

- Advertisement -

Related news

error: Content is protected !!