- Advertisement -
- Advertisement -


ಕಾಂಗ್ರೆಸ್ನವರ ಮೇಕೆದಾಟು ಪಾದಯಾತ್ರೆ ಇದು ದಾರಿಯುದ್ದಕ್ಕೂ ಮೇಕೆ ತಿನ್ನುತ್ತಾ ಪಾದಯಾತ್ರೆ. ಮೊದಲು ಕೋಲಾರಕ್ಕೆ ಎತ್ತಿನಹೊಳೆ ನೀರು ತರುತ್ತೇವೆ ಎಂದಿದ್ದರು. ಈಗ ಎತ್ತು ಒಂದು ಕಡೆ ಹೊಳೆ ಒಂದು ಕಡೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊoದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ನೀತಿ ಆಧಾರದ ಮೇಲೆ ಬೆಳೆದಿದೆ, ಜಾತಿ ಆಧಾರದಲ್ಲಿ ಬೆಳೆದಿಲ್ಲ. ಬಿಜೆಪಿ ಪಕ್ಷ ದೇಶ ಮೊದಲು ಎನ್ನುತ್ತದೆ. ಪಕ್ಷ ಬಳಿಕ ವ್ಯಕ್ತಿ ಕೊನೆ ಎನ್ನುವ ಪಕ್ಷ. ಕೆಲವು ಪಕ್ಷದಲ್ಲಿ ವ್ಯಕ್ತಿ ಮೊದಲು, ಪಕ್ಷ ಬಳಿಕ ದೇಶ ಕೊನೆ ಎಂಬ0ತಿದೆ ಎಂದರು.

ಇನ್ನು ಇದು ವಿವಿಐಪಿ ಪಾದಯಾತ್ರೆ, ಇದಕ್ಕೆ ಉದ್ದೇಶವಿಲ್ಲ. ಮೇಕೆದಾಟು ಯೋಜನೆಗೆ ಅಡ್ಡ ಹಾಕಿದ್ದು ಸ್ಟಾಲಿನ್ ತಾನೆ. ಸ್ಟಾಲಿನ್ ಯಾರ ಬೆಂಬಲದಿoದ ಮುಖ್ಯಮಂತ್ರಿಯಾಗಿದ್ದು? ನಮ್ಮವರಾಗಿದ್ದರೆ ಕಿವಿ ಹಿಂಡಿ ನೀರು ಬಿಡಿಸುತ್ತಿದ್ದೇವು ಎಂದಿದ್ದಾರೆ.





- Advertisement -