Friday, May 17, 2024
spot_imgspot_img
spot_imgspot_img

ಕಾಣಿಯೂರು: ರೈಲ್ವೆ ಟ್ರ್ಯಾಕ್ ನಲ್ಲಿ ರಕ್ತಸಿಕ್ತವಾದ ಯುವಕನ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

- Advertisement -G L Acharya panikkar
- Advertisement -

ಕಡಬ: ಇಲ್ಲಿನ ಕಾಣಿಯೂರು ಬಳಿಯ ರೈಲ್ವೇ ಟ್ರ್ಯಾಕ್ ನಲ್ಲಿ ಯುವಕನ ಮೃತದೇಹವೊಂದು ರಕ್ತಸಿಕ್ತ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಕಾಣಿಯೂರು ಸಮೀಪದ ಅಭೀರ ನಿವಾಸಿ ದಿ.ರಾಮಯ್ಯ ಪೂಜಾರಿ ಅಭೀರರವರ ಪುತ್ರ ದಿವಾಕರ ಪೂಜಾರಿ(40) ಎಂದು ತಿಳಿದು ಬಂದಿದೆ.ಮೃತರು ಪತ್ನಿ ಹಾಗೂ ೮ ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಮೃತ ದೇಹವು ಬೆಳಂದೂರು ಗ್ರಾಮದ ಅಗರಿ ಎಂಬಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ದೇಹದ ಮೇಲೆ ರೈಲು ಹರಿದ ಗುರುತುಗಳಿದ್ದು, ದೇಹವು ಛಿದ್ರ ಛಿದ್ರವಾಗಿ ಚೆಲ್ಲಿಕೊಂಡಿತ್ತು.

ದಿವಾಕರರವರು ಅಲ್ಪ ಸ್ವಲ್ಪ ಜಮೀನು ಹೊಂದಿದ್ದು, ಅದರಲ್ಲಿ ಕೃಷಿ ಚಟುವಟಿಕೆ ತೊಡಗಿಸಿಕೊಂಡಿದ್ದ ಅವರು ಉಳಿಕೆ ಸಮಯದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ನಿನ್ನೆ ಸಂಜೆಯಿಂದ ಅವರು ಮನೆಯಿಂದ ನಾಪತ್ತೆಯಾಗಿದ್ದು , ಮನೆಯವರು ಹಾಗೂ ಕುಟುಂಬ ಸದಸ್ಯರು ರಾತ್ರಿಯಿಂದಲೇ ಅವರ ಹುಡುಕಾಟದಲ್ಲಿ ನಡೆಸಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ ಅವರ ಮೃತ ದೇಹ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ದಿವಾಕರವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ. ಇಂದು ದಿವಾಕರವರ ಮೃತ ದೇಹ ಪತ್ತೆಯಾದ ಸ್ವಲ್ಪ ದೂರದಲ್ಲೇ ಹಲವು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

vtv vitla
vtv vitla
vtv vitla
- Advertisement -

Related news

error: Content is protected !!