- Advertisement -
- Advertisement -
ಮಂಗಳೂರು: ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಗಾರಿಕೆಯ ವಿರುದ್ದ ಕಳೆದ ಒಂದು ವರ್ಷದಿಂದ ತೀವ್ರ ತರದ ಹೋರಾಟ ನಡೆಸಿಕೊಂಡು ಬರುತ್ತಿರುವ ಹಿಂದು ಜಾಗರಣ ವೇದಿಕೆ, ಆದರೆ ಸರಕಾರ ಯಾವುದೇ ಅಧೀಕೃತ ಕಾನೂನು ಜಾರಿ ಮಾಡದ ಕಾರಣ, ಕಳೆದ ವರ್ಷ ನಡೆಸಿದ ಸಹಿ ಸಂಗ್ರಹವನ್ನು ಇಂದು ಮುಖ್ಯಮಂತ್ರಿಗಳಿಗೆ ನೀಡಿ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ , ಸುರತ್ಕಲ್ ಶಾಸಕ ವೈ. ಭಾರತ್ ಶೆಟ್ಟಿ, ಹಿಂಜಾವೇ ಪ್ರಾಂತ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಕಿಶೋರ್ ಕುಮಾರ್, ರತ್ನಾಕರ ಶೆಟ್ಟಿ, ,ಪ್ರಮುಖರಾದ ಜಗದೀಶ ನೆತ್ತರಕೆರೆ, ನರಸಿಂಹ ಮಾಣಿ,ಪ್ರಶಾಂತ್ ಕೆಂಪು ಗುಡ್ಡೆ, ತಿರುಲೇಶ್ ಬೆಳ್ಳೂರು, ರವಿ ಕೆಂಪು ಗುಡ್ಡೆ, ಹರೀಶ್ ಅಮ್ಟಾಡಿ, ತಿಲಕ್ ನಲ್ಕೇಮಾರ್ ಉಪಸ್ಥಿತರಿದ್ದರು.
- Advertisement -