- Advertisement -
- Advertisement -
ಕಾರು – ಲಾರಿ ನಡುವೆ ಢಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ರಾಯಚೂರಿನ ಬಾಲಯ್ಯ ಕ್ಯಾಂಪ್ ಬಳಿ ಈ ದುರ್ಘಟನೆ ನಡೆದಿದೆ. ಮೃತರನ್ನು ಮಧ್ಯಪ್ರದೇಶ ಮೂಲದ ಅಮರದೀಪ್ ಸೆಕ್ಸೇನಾ (35), ಪೂರ್ಣಿಮಾ ಸೆಕ್ಸೇನಾ (30) ಮಕ್ಕಳಾದ ಜಿತಿನ್ (12) ಮತ್ತು ಮಾಹೀನ್ (7) ಎಂದು ಗುರುತಿಸಲಾಗಿದೆ.
ಎರಡು ವಾಹನಗಳು ಮುಖಾಮುಖಿ ಢಿಕ್ಕಿಯಾಗಿದ್ದು, ದುರ್ಘಟನೆ ಸಂಭವಿಸಿದೆ. ಮೃತ ನಾಲ್ವರು ಮಧ್ಯಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ. ಎರಡು ಜೆಸಿಬಿಯಿಂದ ಅಪಘಾತ ವಾಹನಗಳ ತೆರವು ಮಾಡಿದ್ದು, ಮೃತ ದೇಹಗಳನ್ನು ಸಿಂಧನೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -