Friday, May 3, 2024
spot_imgspot_img
spot_imgspot_img

ಕಾರ್ಕಳ ಕ್ಷೇತ್ರದಿಂದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಕಾಂಗ್ರೇಸ್‌ ಟಿಕೆಟ್

- Advertisement -G L Acharya panikkar
- Advertisement -
vtv vitla

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 43 ಕ್ಷೇತ್ರ ಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಕಾರ್ಕಳ ಕ್ಷೇತ್ರದಿಂದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ.

ಈ ಮೂಲಕ ಬಿಜೆಪಿಯಿಂದ ವಿ.ಸುನೀಲ್ ಕುಮಾರ್ , ಪಕ್ಷೇತರರಾಗಿ ಪ್ರಮೋದ್ ಮುತಾಲಿಕ್ ಹಾಗೂ ಕಾಂಗ್ರೆಸ್‌ನಿಂದ ಉದಯ್ ಕುಮಾರ್ ಶೆಟ್ಟಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಕಾರ್ಕಳದಲ್ಲಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ. ಉದಯ್ ಕುಮಾರ್ ಶೆಟ್ಟಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

ಇನ್ನುಳಿದಂತೆ ಕರಾವಳಿಯ ಹೈವೋಲ್ಟೇಜ್ ಕ್ಷೇತ್ರಗಳಾದ ಪುತ್ತೂರು, ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಘೊಷಣೆಯಾಗಿದೆ. ಪುತ್ತೂರು ಕ್ಷೇತ್ರದಿಂದ ಅಶೋಕ್ ರೈಗೆ ಹಾಗೂ ಮಂಗಳೂರು ದಕ್ಷಿಣದಿಂದ ಜೆ.ಆರ್ ಲೋಬೋಗೆ ಟಿಕೆಟ್ ಘೋಷಿಸಿದೆ. ಮಂಗಳೂರು ಉತ್ತರಕ್ಕೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.

- Advertisement -

Related news

error: Content is protected !!