Saturday, May 4, 2024
spot_imgspot_img
spot_imgspot_img

ಕಾಸರಗೋಡು: ಅಕ್ರಮ ಮರಳು ಸಾಗಾಟ; ಮೂವರು ವಶಕ್ಕೆ

- Advertisement -G L Acharya panikkar
- Advertisement -

ಕಾಸರಗೋಡು: ಕಾಸರಗೋಡು ಡಿವೈಎಸ್ಪಿ ಪ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆ ಯಲ್ಲಿ ಜೋಡುಕಲ್ಲು ಬೊಳ್ಳಾರ್ ಎಂಬಲ್ಲಿಂದ ಭಾರೀ ಪ್ರಮಾಣದ ಅಕ್ರಮ ಮರಳು ವಶಪಡಿಸಿಕೊಳ್ಳಲಾಗಿದೆ.

ಮರಳು ತುಂಬಿಸಿದ್ದ ಮೂರು ಲಾರಿಗಳು ಹಾಗೂ ದಾಸ್ತಾನಿಡಲಾಗಿದ್ದ ಐದು ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಮರಳುಗಾರಿಕೆಯಲ್ಲಿ ತೊಡಗಿದ್ದ ಹಾಗೂ ಮರಳುಗಾರಿಕೆಗೆ ಸೌಲಭ್ಯ ನೀಡಿದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಲಾರಿ ಚಾಲಕ ಶರೀಫ್, ಮುಹಮ್ಮದ್ ರಾಫಿ ಬಾಯಿಕಟ್ಟೆ, ಅಬೂಬಕ್ಕರ್ ಸಿದ್ದೀಕ್ ನನ್ನು ಬಂಧಿಸಲಾಗಿದೆ. ಮರಳುಗಾರಿಕೆಗೆ ಸಹಕರಿಸಿದ ಜೋಡುಕಲ್ಲು ಪಜೀರ್ ನ ಖಾಲಿದ್, ಗುಂಡಿಬೈಲ್ ನ ಇಬ್ರಾಹಿಂ ಮೊದಲಾದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!