- Advertisement -
- Advertisement -
ಕಾಸರಗೋಡು: ಗಾಳಿಗೆ ತೆಂಗಿನ ಮರ ಮುರಿದು ಬಿದ್ದು ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ, ಸ್ಟೀಫನ್ ಕ್ರಾಸ್ತಾರ ಪುತ್ರ ನಿಧನರಾಗಿದ್ದಾರೆ. ಎಳನೇ ತರಗತಿ ವಿದ್ಯಾರ್ಥಿ ಸೋನು ಕ್ರಾಸ್ತಾ (13) ಮೃತ ಬಾಲಕ.
ಮನೆ ಬಳಿಯ ತೋಟದಲ್ಲಿ ಇಂದು ಮಧ್ಯಾಹ್ನ ಉಂಟಾದ ಭಾರೀ ಸುಂಟರ ಗಾಳಿಗೆ ತೆಂಗಿನ ಮರ ಮುರಿದು ಬಿದ್ದು ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ತಂಗಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -