- Advertisement -
- Advertisement -
ಕಾಸರಗೋಡು: ವಿದ್ಯಾರ್ಥಿಯೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯ ಕೊಲ್ಲಂಪಾಡಿಯಲ್ಲಿ ನಡೆದಿದೆ.
ಕೊಲ್ಲಂಪಾಡಿಯ ಅದ್ನಾನ್ (24) ಮೃತಪಟ್ಟವನು.
ಆಲಂಪಾಡಿ ಎರಿಯಪ್ಪಾಡಿಯಲ್ಲಿ ಸಹೋದರಿಯ ಮನೆಯಲ್ಲಿ ಬಾವಿಯ ರಾಟೆಗೆ ಸಿಲುಕಿದ ಹಗ್ಗವನ್ನು ತೆಗೆಯೆತ್ನಿಸಿದಾಗ ಬಾವಿಗೆ ಬಿದ್ದಿದ್ದು, ಪರಿಸರವಾಸಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಇನ್ನು ಡಿಗ್ರಿ ವಿದ್ಯಾರ್ಥಿಯಾಗಿದ್ದ ಅದ್ನಾನ್ ಕೇರಳ ಲೋಕಸೇವಾ ಆಯೋಗದ ಪರೀಕ್ಷೆಗಾಗಿ ಕಾಞಂಗಾಡ್ ನ ಟ್ಯೂಶನ್ ಕೇಂದ್ರದಲ್ಲಿ ಕಲಿಯುತ್ತಿದ್ದನು.
ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.
- Advertisement -