- Advertisement -
- Advertisement -
ಮೂಡುಬಿದಿರೆ: ಕೆಲಸವಾದ ಅನಂತರ ನಿಲ್ಲಿಸಿ ಹೋಗಿದ್ದ ಎರಡು ಹಿಟಾಚಿಗಳ ನಾಲ್ಕು ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ತಾಕೊಡೆಯ ಸಿವಿಲ್ ಕಂಟ್ರಾಕ್ಟರ್ ರೋಹನ್ ಕಾಡೋಜಾ ಹಾಗೂ ಪಂಚಶಕ್ತಿ ರಂಜಿತ್ ಪೂಜಾರಿ ತೋಡಾರು ಅವರಿಗೆ ಸೇರಿದ 2 ಹಿಟಾಚಿಗಳನ್ನು ಸಂಜೆ ಕೆಲಸವಾದ ಅನಂತರ ಮೂಡುಬಿದಿರೆಯ ಹೊಟೇಲ್ ಹತ್ತಿರ ನಿಲ್ಲಿಸಿ ಹೋಗಿದ್ದು, ಮರುದಿನ ಬೆಳಗ್ಗೆ ಬಂದು ನೋಡಿದಾಗ ಎರಡೂ ಹಿಟಾಚಿಗಳ ನಾಲ್ಕು ಬ್ಯಾಟರಿಗಳು ಕಳವಾಗಿದ್ದು ಬೆಳಕಿಗೆ ಬಂದಿದೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -