Saturday, April 27, 2024
spot_imgspot_img
spot_imgspot_img

ಕುಂದಾಪುರ: ಚಪ್ಪರ ಹಾಕುವ ವೇಳೆ ಕಂಬ ಬಿದ್ದು ವ್ಯಕ್ತಿ ಸಾವು

- Advertisement -G L Acharya panikkar
- Advertisement -

ಕುಂದಾಪುರ: ಪೂಜಾ ಕಾರ್ಯಕ್ರಮದ ನಿಮಿತ್ತ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬ ವ್ಯಕ್ತಿಯೊಬ್ಬರ ಕುತ್ತಿಗೆಗೆ ಬಿದ್ದು ಮೃತಪಟ್ಟಿರುವ ಘಟನೆ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ರಾಮಚಂದ್ರ ಬಂಡಾರ್ಕರ್ (58) ಎಂದು ಗುರುತಿಸಲಾಗಿದೆ.

ಪೂಜಾ ಕಾರ್ಯಕ್ರಮದ ನಿಮಿತ್ತ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬವು ಮೇಲಿಂದ ಜಾರಿದಾಗ ಅದನ್ನು ತಡೆಯಲು ಹೋದ ಸಮಯ ಕಾಲು ಎಡವಿ ಕೆಳಗೆ ಬಿದ್ದಾಗ ಜಾರಿದ ಅಡಿಕೆ ಮರದ ಕಂಬ ರಾಮಚಂದ್ರ ಅವರ ಕುತ್ತಿಗೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!