- Advertisement -
- Advertisement -
ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ನೀಡುವ ಲಾಡ್ಜ್ನ್ನು ಖಾಸಗಿ ವ್ಯಕ್ತಿಗಳ ಮದುವೆ ಸಮಾರಂಭದ ಅತಿಥಿಗಳಿಗೆ ನೀಡಿ ಆಡಳಿತ ಮಂಡಳಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಂಗಲು ಲಾಡ್ಜ್ನ ವ್ಯವಸ್ಥೆ ಇದ್ದು, ಬಡ ವರ್ಗದ ಭಕ್ತಾದಿಗಳಿಗೆ ನೀಡುವ ಲಾಡ್ಜ್ನ ರೂಂ ನ್ನು ಖಾಸಗಿ ವ್ಯಕ್ತಿಗಳ ಮದುವೆ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಕ್ಷೇತ್ರದ ಆಡಳಿತ ಮಂಡಳಿಯವರು ನೀಡಿದ್ದರು. ಇದರಿಂದ ಭಕ್ತಾದಿಗಳಿಗೆ ಉಳಿದುಕೊಳ್ಳಲು ರೂಂ ಇಲ್ಲದೇ ಪರದಾಡುವಂತಾಯಿತು.ಇದರಿಂದ ಆಕ್ರೋಶಗೊಂಡ ಭಕ್ತಾದಿಗಳು ಆಡಳಿತಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆಲ್ಲಾ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯವರೇ ನೇರ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -