Monday, May 6, 2024
spot_imgspot_img
spot_imgspot_img

‘ಕೃಷಿ ಮಸೂದೆ ಹಿಂಪಡೆದದ್ದು ನಾಚಿಕೆಗೇಡಿನ ಸಂಗತಿ’ – ನಟಿ ಕಂಗನಾ

- Advertisement -G L Acharya panikkar
- Advertisement -
vtv vitla
vtv vitla

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಕಟುವಾಗಿ ಹೇಳುವ ರೀತಿಯಿಂದಲೇ ಕಂಗನಾ ಮನೆ ಮಾತಾಗಿದ್ದಾರೆ. ಪ್ರಧಾನಿ ಮೋದಿ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಿರೋದಾಗಿ ಘೋಷಣೆ ಮಾಡಿದ್ದರು.

ಈ ವಿಚಾರವಾಗಿಯೂ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ, ಬೀದಿಯಲ್ಲಿರುವ ಶಕ್ತಿಯೇ ಹೆಚ್ಚು ಶಕ್ತಿಯುತವಾಗಿದೆ. ರೈತರ ಪ್ರತಿಭಟನೆಯೂ ಇದನ್ನೇ ಸಾಬೀತು ಪಡಿಸಿದೆ ಎಂದು ನೆಟ್ಟಿಗರೊಬ್ಬರ ಪೋಸ್ಟ್​ನ್ನು ಶೇರ್​ ಮಾಡಿರುವ ನಟಿ ಕಂಗನಾ, ಬೇಸರ, ನಾಚಿಕೆಗೇಡು ಹಾಗೂ ಸಂಪೂರ್ಣ ಅನ್ಯಾಯ ಎಂದು ಬರೆದಿದ್ದಾರೆ.

ಬೀದಿಯಲ್ಲಿರುವ ಜನರು ಕಾನೂನು ರಚಿಸುತ್ತಿದ್ದಾರೆಯೇ ಹೊರತು ಸಂಸತ್​ನಲ್ಲಿರುವ ಸರ್ಕಾರವಲ್ಲ. ಇದು ಜಿಹಾದಿ ರಾಷ್ಟ್ರವಾಗಿದೆ. ಈ ರೀತಿಯ ರಾಷ್ಟ್ರವನ್ನು ಬಯಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.

- Advertisement -

Related news

error: Content is protected !!