- Advertisement -
- Advertisement -
ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಬಾಲಿವುಡ್ ನಟಿ ಕಂಗನಾ ರಣಾವತ್ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಕಟುವಾಗಿ ಹೇಳುವ ರೀತಿಯಿಂದಲೇ ಕಂಗನಾ ಮನೆ ಮಾತಾಗಿದ್ದಾರೆ. ಪ್ರಧಾನಿ ಮೋದಿ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಿರೋದಾಗಿ ಘೋಷಣೆ ಮಾಡಿದ್ದರು.
ಈ ವಿಚಾರವಾಗಿಯೂ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ, ಬೀದಿಯಲ್ಲಿರುವ ಶಕ್ತಿಯೇ ಹೆಚ್ಚು ಶಕ್ತಿಯುತವಾಗಿದೆ. ರೈತರ ಪ್ರತಿಭಟನೆಯೂ ಇದನ್ನೇ ಸಾಬೀತು ಪಡಿಸಿದೆ ಎಂದು ನೆಟ್ಟಿಗರೊಬ್ಬರ ಪೋಸ್ಟ್ನ್ನು ಶೇರ್ ಮಾಡಿರುವ ನಟಿ ಕಂಗನಾ, ಬೇಸರ, ನಾಚಿಕೆಗೇಡು ಹಾಗೂ ಸಂಪೂರ್ಣ ಅನ್ಯಾಯ ಎಂದು ಬರೆದಿದ್ದಾರೆ.
ಬೀದಿಯಲ್ಲಿರುವ ಜನರು ಕಾನೂನು ರಚಿಸುತ್ತಿದ್ದಾರೆಯೇ ಹೊರತು ಸಂಸತ್ನಲ್ಲಿರುವ ಸರ್ಕಾರವಲ್ಲ. ಇದು ಜಿಹಾದಿ ರಾಷ್ಟ್ರವಾಗಿದೆ. ಈ ರೀತಿಯ ರಾಷ್ಟ್ರವನ್ನು ಬಯಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.
- Advertisement -