Saturday, April 20, 2024
spot_imgspot_img
spot_imgspot_img

ಕೆಬಿಸಿ ಬಹುಮಾನದ ಹೆಸರಿನಲ್ಲಿ ಮಂಗಳೂರಿನ ದಂಪತಿಗೆ ವಂಚನೆ ಯತ್ನ; ಇಬ್ಬರು ಆರೋಪಿಗಳ ಬಂಧನ

- Advertisement -G L Acharya panikkar
- Advertisement -
vtv vitla

ಮಂಗಳೂರು: ಕೆಬಿಸಿ ಬಹುಮಾನದ ಹೆಸರಿನಲ್ಲಿ ದಂಪತಿಯನ್ನು ವಂಚಿಸಲು ಯತ್ನಿಸಿದ ಆರೋಪಿಗಳನ್ನು ನಿನ್ನೆ ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಂಪತಿಗೆ ಮೇ 26ರಂದು ‘ನೀವು 25 ಲಕ್ಷ ರೂ. ಬಹುಮಾನ ಗೆದ್ದಿದ್ದು, ಬಹುಮಾನ ಸ್ವೀಕರಿಸಲು ಬ್ಯಾಂಕ್ ವಿವರಗಳೊಂದಿಗೆ ವಾಟ್ಸಾಪ್ ಕಾಲ್ ಮಾತ್ರ ಮಾಡಬೇಕು ಎಂದು +92 ಸಂಖ್ಯೆಯಿಂದ ಆರಂಭವಾಗುವ ಅಲ್ಲದೆ ಅಮಿತಾಬ್ ಬಚ್ಚನ್ ಚಿತ್ರ ಮತ್ತು ಕೆಬಿಸಿ ಲೋಗೊ ಮುದ್ರಿತವಾಗಿದ್ದ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್
ಮೆಸೇಜ್ ಬಂದಿತ್ತು.

ನವದೆಹಲಿಯಲ್ಲಿಯೂ ಮಹಿಳೆಯೋರ್ವರಿಗೆ ಈ ರೀತಿಯ ವಂಚನೆ ನಡೆದಿದ್ದು, 25 ಲಕ್ಷ ರೂ. ಬಹುಮಾನ ಗೆದ್ದಿದ್ದು, ಅದನ್ನು ಪಡೆದುಕೊಳ್ಳಲು 12,500 ರೂ. ತೆರಿಗೆ ಕಳುಹಿಸಬೇಕು ಎಂದು ತಿಳಿಸಿದ್ದರು. ಅದನ್ನು ಕಳುಹಿಸಿದಾಗ ಮತ್ತೆ 25000 ರೂ. ಕಳುಹಿಸಲು ಹೇಳಿದ್ದಾರೆ. ಇದರಿಂದ ಸಂಶಯಗೊಂಡ ಅವರು ಪೊಲೀಸ್ ದೂರು ನೀಡಿದ್ದಾರೆ.

ದೂರಿನ ಮೇರೆಗೆ ವಂಚಕರಾದ ಬಿಹಾರ ಮೂಲದ ಪ್ರಣವ್ ಕುಮಾರ್ ಮಿಶ್ರಾ (23) ಮತ್ತು ಜಾರ್ಖಂಡ್ ನ ಗೌತಮ್ ಪ್ರಸಾದ್ ಯಾದವ್(29) ಅವರನ್ನುಬಂಧಿಸಿದ್ದಾರೆ. ಆರೋಪಿಗಳು ಹರಿಯಾಣದಲ್ಲೂ ಇಂತಹುದೇ ಕೃತ್ಯ ಎಸಗಿದ್ದರು ಎನ್ನಲಾಗಿದೆ. ಐದು ಮೊಬೈಲ್ ಫೋನ್, 33 ಸಿಮ್ ಕಾರ್ಡ್, 11 ಡೆಬಿಟ್ ಕಾರ್ಡ್, 5 ಬ್ಯಾಂಕ್ ಪಾಸ್ ಬುಕ್ ಮತ್ತು ನಕಲಿ ಐಡಿ ಕಾರ್ಡ್ ಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

vtv vitla
- Advertisement -

Related news

error: Content is protected !!