Saturday, April 27, 2024
spot_imgspot_img
spot_imgspot_img

ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಗಲಾಟೆ: ಕೊಲೆಯಲ್ಲಿ ಅಂತ್ಯ

- Advertisement -G L Acharya panikkar
- Advertisement -

ಕ್ರಿಕೆಟ್​ ಬೆಟ್ಟಿಂಗ್​ ಹಣದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಟ್ಯಾಂಕ್​ ಬಳಿ ನಡೆದಿದೆ. ಗವನಹಳ್ಳಿ ಮೂಲದ ಧ್ರುವರಾಜ್​ ಅರಸ್​(23) ಮೃತಪಟ್ಟವ.

ವಸ್ತಾರೆ ಮೂಲದ ಪ್ರಮೋದ್​ ಆರೋಪಿ. ಕ್ರಿಕೆಟ್​ ಬೆಟ್ಟಿಂಗ್​ಗೆ ಸಂಬಂಧಿಸಿ ಹಣದ ವ್ಯವಹಾರ ಮಾತನಾಡಲು ಧ್ರುವರಾಜ್​ನನ್ನು ಕರೆಸಿಕೊಂಡ ಗುಂಪೊಂದು ಕೋಟೆ ಬಳಿಯ ದೊಡ್ಡ ಟ್ಯಾಂಕ್​ ಬಳಿ ಹಣ ವಸೂಲಿಗೆ ಮುಂದಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಡ್ಯಾಗರ್​ನಿಂದ ಇರಿದು ಹತ್ಯೆ ಮಾಡಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.

vtv vitla
vtv vitla
- Advertisement -

Related news

error: Content is protected !!