- Advertisement -
- Advertisement -
ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಟ್ಯಾಂಕ್ ಬಳಿ ನಡೆದಿದೆ. ಗವನಹಳ್ಳಿ ಮೂಲದ ಧ್ರುವರಾಜ್ ಅರಸ್(23) ಮೃತಪಟ್ಟವ.
ವಸ್ತಾರೆ ಮೂಲದ ಪ್ರಮೋದ್ ಆರೋಪಿ. ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿ ಹಣದ ವ್ಯವಹಾರ ಮಾತನಾಡಲು ಧ್ರುವರಾಜ್ನನ್ನು ಕರೆಸಿಕೊಂಡ ಗುಂಪೊಂದು ಕೋಟೆ ಬಳಿಯ ದೊಡ್ಡ ಟ್ಯಾಂಕ್ ಬಳಿ ಹಣ ವಸೂಲಿಗೆ ಮುಂದಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಡ್ಯಾಗರ್ನಿಂದ ಇರಿದು ಹತ್ಯೆ ಮಾಡಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.
- Advertisement -