ದೇವರೆಂದು ಪೂಜಿಸುವ ತುಳಸಿ ಆಯುರ್ವೇದ ಗಿಡ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ತುಳಸಿ ಎಲೆಗಳನ್ನ ಸೇವಿಸಿ. ಇದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಿ ಮಜ್ಜಿಗೆ ದೇಹವನ್ನು ತಣ್ಣಗಾಗಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಮಜ್ಜಿಗೆ ಕುಡಿಯಿರಿ. ಮಜ್ಜಿಗೆಯಲ್ಲಿರುವ ಪೌಷ್ಟಿಕಾಂಶ, ಲ್ಯಾಕ್ಟಿವ್ ಆಸಿಡ್ ಅಂಶ ಇರುವುದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.
ತಂಪಾದ ಹಾಲನ್ನು ಸೇವಿಸಿದರೆ ಎದೆ ಉರಿ ಮತ್ತು ತೇಗು ಬಹಳ ಬೇಗ ಕಡಿಮೆಯಾಗುತ್ತದೆ. ನೀವು ಹಾಲು ಕುಡಿಯುವಾಗ ಸಕ್ಕರೆ ಹಾಕಿಕೊಳ್ಳಬಾರದು.
ಊಟದ ನಂತರ ಸೋಂಪು ತಿಂದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಹೋಟೆಲ್ಗಳಲ್ಲಿ ಊಟದ ಕೊನೆಯಲ್ಲಿ ಸೋಂಪು ತಿನ್ನಲು ನೀಡುತ್ತಾರೆ. ಗ್ಯಾಸ್ಟ್ರಿಕ್ ಇದ್ದವರು ಸೋಂಪು ಸೇವಿಸಬಹುದು. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.
ಕೊತ್ತಂಬರಿ ಕಾಳನ್ನು ಬಾಯಿಗೆ ಹಾಕಿಕೊಂಡು ಅಗಿಯಿರಿ. 10ರಿಂದ 12 ಕಾಳು ಅಗಿಯಿರಿ. ಹೀಗೆ ಮಾಡಿದರೆ ಎದೆ ಉರಿ ತಕ್ಷಣ ಕಡಿಮೆಯಾಗುತ್ತದೆ. ಜೀರಿಗೆಯನ್ನೂ ಸೇವಿಸಬಹುದು. ಗ್ಯಾಸ್ಟ್ರಿಕ್ಗೆ ತುಂಬಾ ಒಳ್ಳೆಯದು.