ಉತ್ತರಾಖಂಡ್: ಸಾಮಾನ್ಯವಾಗಿ ಮನುಷ್ಯನ ಜಾತಕದಲ್ಲಿ ಅನೇಕ ದೋಷಗಳಿರುತ್ತೆ ಅದಕ್ಕೆ ಜ್ಯೋತಿಷಿಗಳು ಪರಿಹಾರವನ್ನು ಸೂಚಿಸುತ್ತಾರೆ. ಆದ್ರೆ ಜಾತಕದಲ್ಲಿ ಬಂಧನ ದೋಷವಿದ್ದಾರೆ ಬಾಡಿಗೆ ರೂಪದಲ್ಲಿ ಇಲ್ಲೊಂದು ವಿಶೇಷ ಜೈಲ್ಲೊಂದಿದೆ.
ಹೌದು ಕೇಳಲು ವಿಚಿತ್ರವಾದರೂ ಇದು ಸತ್ಯ. ಒಂದು ವೇಳೆ ನಿಮ್ಮ ಜಾತಕದಲ್ಲಿ ನೀವು ಜೈಲು ಸೇರುತ್ತೀರಿ ಅಥವಾ ಬಂಧನವಾಗುವ ಸಾಧ್ಯತೆಯಿದ್ದರೆ ನಿಮ್ಮ ಜೈಲಿನ ದೋಷಕ್ಕೆ ಪರಿಹಾರವಾಗಿ ಒಂದು ದಿನಕ್ಕೆ ಬಾಡಿಗೆ ರೂಪದಲ್ಲಿ 500 ರೂ. ಕೊಟ್ಟು ಜೈಲುಶಿಕ್ಷೆ ಅನುಭವಿಸಬಹುದು.! ಉತ್ತರಾಖಂಡದ ಹಲ್ದ್ವಾನಿ ಜೈಲು ಈ ದೋಷವನ್ನು ಪರಿಹರಿಸಿಕೊಳ್ಳಲು ಅವಕಾಶ ನೀಡಿದೆ. ಈ ರೀತಿ ಬಾಡಿಗೆ ಕೊಟ್ಟು ಜೈಲಿನಲ್ಲಿರಲು ಅವಕಾಶ ನೀಡಿದ ದೇಶದ ಮೊದಲ ಜೈಲು ಇದಾಗಿದೆ.
ಒಂದು ವೇಳೆ ಜಾತಕದಲ್ಲಿ ʼಬಂಧನ ದೋಷʼವಿದ್ದರೆ ಅವರು ಜೈಲಿನಲ್ಲಿ ದಿನಕ್ಕೆ 500 ರೂ. ಕೊಟ್ಟು ಇರಬಹುದು ಅಂಥವರಿಗೆ ಜೈಲಿನ ಹಳೆಯ ವಿಭಾಗದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗುತ್ತದೆ. ಈ ವ್ಯವಸ್ಥೆಗೆ ಪ್ರಧಾನ ಕಚೇರಿಯಿಂದ ಅನುಮತಿ ಪಡೆಯಬೇಕೆಂದು ಜೈಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.