Saturday, May 11, 2024
spot_imgspot_img
spot_imgspot_img

ಜೈಲಿನಿಂದ ರಿಲೀಸ್​​ ಆದ್ಮೇಲೆ ಸಮಾಜ ಸೇವೆ ಮಾಡುತ್ತೇನೆ; ಶಾರುಖ್​ ಮಗ ಆರ್ಯನ್​​​ ಭರವಸೆ​​

- Advertisement -G L Acharya panikkar
- Advertisement -
driving

ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದ ಆರೋಪದಲ್ಲಿ ಜೈಲು ಸೇರಿದ ನಟ ಶಾರುಖ್​​ ಪುತ್ರ ಆರ್ಯನ್​ ಖಾನ್​​ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡುವ ಭರವಸೆಗಳನ್ನು ನೀಡಿದ್ದಾರಂತೆ. ಜೈಲಿಗೆ ಕಳಿಸುವ ಮುನ್ನ ಆರ್ಯನ್​ ಖಾನ್​​​ನನ್ನು ಎನ್​​ಸಿಬಿ ಅಧಿಕಾರಿಗಳು ಕೌನ್ಸೆಲಿಂಗ್​​ ಮಾಡಿದರು. ಈ ಸಂದರ್ಭದಲ್ಲಿ ಆರ್ಯನ್​​ ಖಾನ್​​, ತಾವು ಹೆಮ್ಮೆಪಡುವಂತಹ ಕಾರ್ಯಗಳನ್ನು ಮುಂದೆ ಮಾಡುತ್ತೇನೆ ಎಂದು ಎನ್​​ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ಹೇಳಿದ್ದಾಗಿ ವರದಿಯಾಗಿದೆ.

ನಾನು ಜೈಲಿನಿಂದ ರಿಲೀಸ್​​ ಆದಮೇಲೆ ಒಳ್ಳೆಯ ಕೆಲಸಗಳನ್ನು ಮಾತಾಡುತ್ತೇನೆ. ವಿಶೇಷವಾಗಿ ಬಡವರ ಪರ ಕೆಲಸ ಮಾಡುತ್ತೇನೆ. ನಾನು ಮಾಡುವ ಸಮಾಜ ಸೇವೆ ನೋಡಿ ಒಂದು ದಿನ ನೀವೇ ಹೆಮ್ಮೆ ಪಡುತ್ತೀರಿ ಎಂದು ಆರ್ಯನ್​​ ವಾಖೆಂಡೆಗೆ ಭರಸವೆ ನೀಡಿದ್ದ ಎಂದು ಹೇಳಲಾಗುತ್ತಿದೆ.

ಆರ್ಯನ್​ ಖಾನ್​​ ಇನ್ನು ಮೂರು ದಿನಗಳ ಕಾಲ ಅಕ್ಟೋಬರ್​​ 20ನೇ ತಾರೀಕಿನವರೆಗೂ ಜೈಲಿನಲ್ಲೇ ಇರಬೇಕಾಗಿದೆ. ಹೀಗಿರುವಾಗಲೇ ಆರ್ಯನ್​​ ಭವಿಷ್ಯದ ದೃಷ್ಟಿಯಿಂದ ಎನ್​​ಸಿಬಿ ಅಧಿಕಾರಿಗಳು ಒಂದಷ್ಟು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!