ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಲ್ಲಿ ಜೈಲು ಸೇರಿದ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡುವ ಭರವಸೆಗಳನ್ನು ನೀಡಿದ್ದಾರಂತೆ. ಜೈಲಿಗೆ ಕಳಿಸುವ ಮುನ್ನ ಆರ್ಯನ್ ಖಾನ್ನನ್ನು ಎನ್ಸಿಬಿ ಅಧಿಕಾರಿಗಳು ಕೌನ್ಸೆಲಿಂಗ್ ಮಾಡಿದರು. ಈ ಸಂದರ್ಭದಲ್ಲಿ ಆರ್ಯನ್ ಖಾನ್, ತಾವು ಹೆಮ್ಮೆಪಡುವಂತಹ ಕಾರ್ಯಗಳನ್ನು ಮುಂದೆ ಮಾಡುತ್ತೇನೆ ಎಂದು ಎನ್ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ಹೇಳಿದ್ದಾಗಿ ವರದಿಯಾಗಿದೆ.
ನಾನು ಜೈಲಿನಿಂದ ರಿಲೀಸ್ ಆದಮೇಲೆ ಒಳ್ಳೆಯ ಕೆಲಸಗಳನ್ನು ಮಾತಾಡುತ್ತೇನೆ. ವಿಶೇಷವಾಗಿ ಬಡವರ ಪರ ಕೆಲಸ ಮಾಡುತ್ತೇನೆ. ನಾನು ಮಾಡುವ ಸಮಾಜ ಸೇವೆ ನೋಡಿ ಒಂದು ದಿನ ನೀವೇ ಹೆಮ್ಮೆ ಪಡುತ್ತೀರಿ ಎಂದು ಆರ್ಯನ್ ವಾಖೆಂಡೆಗೆ ಭರಸವೆ ನೀಡಿದ್ದ ಎಂದು ಹೇಳಲಾಗುತ್ತಿದೆ.
ಆರ್ಯನ್ ಖಾನ್ ಇನ್ನು ಮೂರು ದಿನಗಳ ಕಾಲ ಅಕ್ಟೋಬರ್ 20ನೇ ತಾರೀಕಿನವರೆಗೂ ಜೈಲಿನಲ್ಲೇ ಇರಬೇಕಾಗಿದೆ. ಹೀಗಿರುವಾಗಲೇ ಆರ್ಯನ್ ಭವಿಷ್ಯದ ದೃಷ್ಟಿಯಿಂದ ಎನ್ಸಿಬಿ ಅಧಿಕಾರಿಗಳು ಒಂದಷ್ಟು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.