- Advertisement -
- Advertisement -
ಬೈಕ್ ನಲ್ಲಿ ಜಾಲಿ ರೈಡ್ ಗೆ ಹೊರಟ್ಟಿದ್ದ ಯುವಕನೋರ್ವ ಸೇತುವೆಯಿಂದ ಕೆಳಬಿದ್ದು ದುರಂತ ಸಾವನ್ನಪ್ಪಿದ ಘಟನೆ ನಡೆದಿದೆ. ಸಾಪ್ಟ್ ವೇರ್ ಎಂಜಿನಿಯರ್ ಬೆಂಗಳೂರಿನ ಬನಶಂಕರಿ ಎರಡನೇ ಹಂತ 27 ವರ್ಷದ ಸೂರಜ್ ಮೃತ ಯುವಕ.
ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಬಳಿ ಘಟನೆ ನಡೆದಿದೆ. ಸೂರಜ್ ಬೆಂಗಳೂರಿನ ಇನ್ ಪೋಸಿಸ್ ಕಂಪನಿಯಲ್ಲಿ ಎಂಜಿನಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ ರಜಾ ದಿನವಾದ ಕಾರಣ ಸ್ನೇಹಿತರೊಂದಿಗೆ ಬೆಳಗ್ಗೆ 6 ಗಂಟೆಗೆ ಡುಕಾಟಿ ಬೈಕ್ ನಲ್ಲಿ ಎಡಿಯೂರು ಬಳಿ ಇರುವ ದ್ರುವ ತಾರೆ ಹೋಟೆಲ್ ಗೆ ಹೋಗುವಾಗ ತಾಲೂಕಿನ ಗವಿಮಠ ಬಳಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
- Advertisement -