ಉಡುಪಿ: ಝೀ ಕನ್ನಡ ವಾಹಿನಿಯ ಜನಪ್ರಿಯ ಡ್ರಾಮಾ ಜೂನಿಯರ್ ಸೀಸನ್ 4 ಸ್ಪರ್ಧೆಯಲ್ಲಿಉಡುಪಿ ಜಿಲ್ಲೆಯ ಅಜೆಕಾರು ಸಮೀಪದ ಸಾಂತ್ಯಾರಿನ ಸಾನಿಧ್ಯ ಪೆರ್ಡೂರು ಅವರು ಕಠಿಣ ಸ್ಪರ್ಧೆ ನೀಡಿ ನಾಡಿನ ಗಮನಸೆಳೆದಿದ್ದು ಪ್ರಥಮ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ.
ಐದು ತಿಂಗಳ ಕಾಲ ಉತ್ತಮ ಪ್ರದರ್ಶನ ನೀಡಿ ಅಂತಿಮ ಸುತ್ತಿನಲ್ಲಿದ್ದು, ವಿಜಯದ ಹಾದಿಯನ್ನು ಕ್ರಮಿಸಿದ್ದರು. ಖ್ಯಾತ ಸಿನಿಮಾ ಸ್ಟಾರ್ ಗಳಾದ ಲಕ್ಷ್ಮಿ, ರವಿಚಂದ್ರನ್, ರಚಿತಾ ರಾಮ್ ಅವರು ನಿರ್ಣಾಯಕರಾಗಿದ್ದು ಬಹುಮಾನ ವಿತರಣಾ ಸಮಾರಂಭದ ವಿಶೇಷ ಆಕರ್ಷಣೆ ಆಗಿದ್ದರು.
ಈ ಬಾರಿ ಪ್ರಥಮ ಸ್ಥಾನ ಕುಂದಾಪುರದ ಸಮೃದ್ಧಿ ಮೊದಲ ಸ್ಥಾನಗಳಿಸಿದ್ದು, ಕರಾವಳಿಯ ಮೂವರು ಪ್ರತಿಭೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿರುವುದು ವಿಶೇಷವಾಗಿದೆ. ಸಾನಿಧ್ಯ ಸುರೇಂದ್ರ ಆಚಾರ್ಯ ಮತ್ತು ನಾಗಲತಾ ದಂಪತಿಗಳ ಪುತ್ರಿಯಾಗಿದ್ದಾರೆ. ಪೆರ್ಡೂರಿನ ಎಫ್.ಎಸ್.ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಬಹುಮುಖ ಪ್ರತಿಭೆಯ ಸಾನಿಧ್ಯ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -ಸೀಸನ್ 5ರ ಪೈನಲಿಸ್ಟ್ ಆಗಿ ಮಿಂಚಿದ್ದರು.