Sunday, April 28, 2024
spot_imgspot_img
spot_imgspot_img

ತನ್ನ ಮಗಳಿಗಿಂತ ಆ ಬಾಲಕ ಎಲ್ಲದರಲ್ಲೂ ಮುಂದು..! ಅಸೂಯೆ ತಾಳಲಾರದೆ ಬಾಲಕನಿಗೆ ವಿಷ ಹಾಕಿ ಕೊಂದ ತಾಯಿ

- Advertisement -G L Acharya panikkar
- Advertisement -

ತನ್ನ ಮಗಳು ಚೆನ್ನಾಗಿ ಓದುತ್ತಾಳೆ. ಆದ್ರೆ ಆಕೆಗೆ ಸಹಪಾಠಿ ಪೈಪೋಟಿ ಕೊಡುತ್ತಾನೆ ಎಂದು ಮಗಳ ಸಹಪಾಠಿಯನ್ನು ವಿಷಹಾಕಿ ಕೊಂದ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ತಮಿಳುನಾಡಿನ ಕಾರೈಕಲ್ ನಲ್ಲಿ ನಡೆದಿದೆ.

ಖಾಸಗಿ ಶಾಲೆಯಲ್ಲಿ 8ನೇ ತರಗತಿ ಟಾಪರ್ ಆಗಿದ್ದೂ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದೆ ಇದ್ದ 13 ವರ್ಷದ ಬಾಲಕನಿಗೆ ಪಾನೀಯದಲ್ಲಿ ಹಾಕಿದ್ದ ವಿಷ ಸೇವಿಸಿ ಮೃತಪಟ್ಟಿದ್ದಾನೆ. 42 ವರ್ಷದ ಜೆ ಸಹಾಯರಾಣಿ ವಿಕ್ಟೋರಿಯಾ ಕೊಲೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಹಾಯರಾಣಿ ವಿಕ್ಟೋರಿಯಾ ಮಗಳು ಓದುತ್ತಿದ್ದ ತರಗತಿಯಲ್ಲಿ ಬಾಲಕ ಓದುತ್ತಿದ್ದ. ಮಗಳಿಗಿಂತ ಉತ್ತಮವಾಗಿ ಓದುತ್ತಿದ್ದ ಹುಡುಗನ ಬಗ್ಗೆ ಆಕೆ ಅಸಮಾಧಾನ ಹೊಂದಿದ್ದಳು.

ಶುಕ್ರವಾರ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಾಲಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಮುಂದಾಗಿದ್ದ. ಅಂದು ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಆರೋಪಿ ವಿಕ್ಟೋರಿಯಾ, ಕಾವಲುಗಾರನಿಗೆ ಬಾಲಕನ ತಾಯಿ ಎಂದು ಸುಳ್ಳು ಹೇಳಿ ಮಗನಿಗೆ ತಂಪು ಪಾನೀಯ ನೀಡುವಂತೆ 2 ಬಾಟಲಿಗಳನ್ನು ಕೊಟ್ಟು ಹೋಗಿದ್ದಳು.

ಪಾನೀಯ ಸೇವಿಸಿದ ನಂತರ ಬಾಲಕ ಅಸ್ವಸ್ಥಗೊಂಡಿದ್ದು, ಮನೆಗೆ ತಲುಪಿದ ಮೇಲೆ ಬಾಟಲಿಯನ್ನು ಎಸೆದಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು ಮಗನನ್ನು ಕಾರೈಕಲ್ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪೋಷಕರು ಶಾಲೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರೀಕ್ಷಿಸಿದಾಗ ಸಹಾಯರಾಣಿ ವಿಕ್ಟೋರಿಯಾ ಕಾವಲುಗಾರನಿಗೆ ಪಾನೀಯ ಬಾಟಲ್ ಗಳನ್ನು ನೀಡಿದ್ದು ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಕ್ಟೋರಿಯಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮೆಡಿಕಲ್ ಸ್ಟೋರ್ ನಿಂದ ಮಾತ್ರೆಗಳನ್ನು ಖರೀದಿಸಿ ಪಾನೀಯದಲ್ಲಿ ಬೆರೆಸಿ ನೀಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಶಾಲೆಯ ವಾರ್ಷಿಕ ದಿನದ ಕಾರ್ಯಕ್ರಮಗಳಲ್ಲಿ ಬಾಲಕ ಭಾಗವಹಿಸದಂತೆ ತಡೆಯಲು ಹೀಗೆ ಮಾಡಿದ್ದಾಗಿ ತಿಳಿಸಿದ್ದಾಗಿ ಆರೋಪಿ ವಿಕ್ಟೋರಿಯಾ ತಿಳಿಸಿದ್ದು, ಬಾಲಕನಿಗೆ ನೀಡಿದ ಮಾತ್ರೆ ಯಾವುದು ಎಂದು ತಿಳಿಯಲು ಶವಪರೀಕ್ಷೆ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಕಾರೈಕಲ್‌ನ ಹಿರಿಯ ಪೊಲೀಸ್ ಅಧೀಕ್ಷಕ ಆರ್ ಲೋಕೇಶ್ವರನ್ ತಿಳಿಸಿದ್ದಾರೆ. ಸಹಾಯರಾಣಿ ವಿಕ್ಟೋರಿಯಾ ಅವರನ್ನು ಬಂಧಿಸಿರುವ ಕಾರೈಕಲ್ ಪಟ್ಟಣ ಪೊಲೀಸರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

astr
- Advertisement -

Related news

error: Content is protected !!