Thursday, May 2, 2024
spot_imgspot_img
spot_imgspot_img

ತಿರುವೋಣಂ ಬಂಪರ್ ಲಾಟರಿ; ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಬಡ ಆಟೋ ಚಾಲಕ

- Advertisement -G L Acharya panikkar
- Advertisement -

ಕೇರಳ ಸರಕಾರದ ಈ ಸಾಲಿನ ತಿರುವೋಣಂ ಬಂಪರ್ ಲಾಟರಿಯ ಫಲಿತಾಂಶ ಪ್ರಕಟಗೊಂಡಿದ್ದು ಬಡ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ 58 ವರ್ಷದ ಆಟೋ ರಿಕ್ಷಾ ಚಾಲಕ ಕೊಚ್ಚಿಯ ಮರಡು ನಿವಾಸಿ ಜಯಪಾಲನ್ ಪಿ ಆರ್ ಈ ಬಂಪರ್‌ ಬಹುಮಾನ ವಿಜೇತರು. ತಿರುವೋಣಂ ಬಂಪರ್ ಲಾಟರಿಯ ಮೊತ್ತ ₹12 ಕೋಟಿ. ಬಹುಮಾನ ಮೊತ್ತದಿಂದ ತೆರಿಗೆಗಳನ್ನು ಮತ್ತು ಏಜೆನ್ಸಿಯ ಕಮಿಷನ್ ಅನ್ನು ಕಡಿತಗೊಳಿಸಿದ ನಂತರ, ಜಯಪಾಲನ್ ಗೆ ಸುಮಾರು ₹7.4 ಕೋಟಿ ಬಹುಮಾನವಾಗಿ ಕೈಸೇರಲಿದೆ.

ಲಾಟರಿ ಗೆದ್ದ ನಂತರ, ಜಯಪಾಲನ್ ಲಾಟರಿ ಖರೀದಿಸಿದ ವಿವರ ತಿಳಿಸಿದ್ದು, ತಾನು ಸೆಪ್ಟೆಂಬರ್ 10 ರಂದು ತ್ರಿಪುನಿತುರಾದಲ್ಲಿ ಈ ಲಾಟರಿ ಟಿಕೆಟ್ ಖರೀದಿಸಿದ್ದೆ. ಆದರೆ ಲಾಟರಿ ಪಲಿತಾಂಶ ಪ್ರಕಟವಾದ ಬಳಿಕವೇ ಇದೊಂದು ಫ್ಯಾನ್ಸಿ ನಂಬರ್ ಎಂಬುವುದು ತಿಳಿದು ಬಂದಿದೆ ಎಂದಿದ್ದಾರೆ.

ಬಹುಮಾನ ಪಡೆದ ಲಾಟರಿ ಟಿಕೆಟ್‌ ಅನ್ನು ಹತ್ತಿರದ ಬ್ಯಾಂಕ್ ಶಾಖೆಗೆ ಸಲ್ಲಿಸಿದ್ದರು. ಜಯಪಾಲನ್ ಅವರು ಖರೀದಿಸಿದ ಲಾಟರಿಗೆ ಮೊದಲ ಬಹುಮಾನ ಸಿಕ್ಕಿದೆ ಎನ್ನುವುದನ್ನು ಬ್ಯಾಂಕ್‌ ಸಿಬಂದಿಗಳು ಖಚಿತ ಪಡಿಸಿದ್ದಾರೆ. ಅದಕ್ಕೂ ಮೊದಲು ಈ ಬಾರಿಯ ಪ್ರಥಮ ಬಹಮಾನ ಗಲ್ಫ್‌ ನಲ್ಲಿರುವ ವ್ಯಕ್ತಿಯೊಬ್ಬರಿಗೆ ಲಭಿಸಿದೆ ಎಂದು ವದಂತಿ ಹಬ್ಬಿತ್ತು. ತಾಯಿ ಹಾಗೂ ಮಗನ ಜತೆ ಲಾಟರಿ ವಿಜೇತ ಜಯಪಾಲನ್ ಪೋಟೊ ತೆಗೆಸಿಕೊಂಡು ವದಂತಿಗಳಿಗೆ ತೆರೆ ಎಳೆದಿದ್ದಾರೆ.

driving
- Advertisement -

Related news

error: Content is protected !!