- Advertisement -
- Advertisement -
ಹೈದರಾಬಾದ್: ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದ ತೆಲುಗು ಚಿತ್ರರಂಗದ ದಿಗ್ಗಜ ನಿರ್ದೇಶಕ, ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದ ಕೆ .ವಿಶ್ವನಾಥ್ (92) ನಿಧನರಾದರು.
1951ರಲ್ಲಿ ಪಾತಾಳ ಭೈರವಿ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಅವರು ಚಿತ್ರರಂಗಕ್ಕೆ ಪಾರ್ದಾಪಣೆ ಮಾಡಿದ್ದರು.
1965ರಲ್ಲಿ ತೆರೆ ಕಂಡ ಆತ್ಮಗೌಡರಂ ಅವರ ಮೊದಲು ನಿರ್ದೇಶನ ಮಾಡಿದ ಚಿತ್ರ. ಸೂಪರ್ ಹಿಟ್ ಚಿತ್ರ ಶಂಕರಾಭರಣಂ ಅವರ ಅಪೂರ್ವ ಕೊಡುಗೆ.
1992ರಲ್ಲಿ ವಿಶ್ವನಾಥ್ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2016ರಲ್ಲಿ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ವಿಶ್ವನಾಥ್ ಪಾತ್ರರಾಗಿದ್ದರು.
ಕೆ.ವಿಶ್ವನಾಥ್ ನಿರ್ದೇಶನದ ಜನಪ್ರಿಯ ಸಿನಿಮಾ ‘ಶಂಕರಾಭರಣಂ’ 1980 ಫೆಬ್ರವರಿ 2ರಂದು ಬಿಡುಗಡೆಯಾಗಿತ್ತು. 45 ವರ್ಷಗಳ ಬಳಿಕ ಅದೇ ದಿನ (ಫೆಬ್ರವರಿ 2) ವಿಶ್ವನಾಥ್ ಇಹಲೋಕ ತ್ಯಚಿಸಿರುವುದು ಕಾಕತಳಿಯೇ ಸರಿ.
- Advertisement -