Monday, May 6, 2024
spot_imgspot_img
spot_imgspot_img

ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ ಗೆ ವಂಚಿಸಿದ ಸಿನೆಮಾ ನಿರ್ದೇಶಕ ಅರೆಸ್ಟ್!

- Advertisement -G L Acharya panikkar
- Advertisement -
driving

ಬೆಂಗಳೂರು: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ ಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಮಧುರ ಸ್ವಪ್ನ ಚಿತ್ರಕ್ಕೆ ಕರಮಲ ಬಾಲರವೀಂದ್ರನಾಥ್ ನಿರ್ದೇಶನ ಮಾಡಿದ್ದರು.

ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ ನಿಂದ 42.91 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ನಿರ್ದೇಶಕ ಕರಮಲ ಅವರಿಗೆ ಬಡ್ಡಿ ಕಟ್ಟುವಂತೆ ಸೂಚಿಸಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಬ್ಯಾಂಕ್ ನವರು ಅಡವಿಟ್ಟ ಚಿನ್ನ ಹರಾಜು ಹಾಕುವುದಾಗಿ ಹೇಳಿ ನೋಟೀಸ್ ನೀಡಿದ್ದರು. ಆದರೆ ಆ ನೋಟೀಸ್ ಗೂ ನಿರ್ದೇಶಕರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇದರಿಂದ ಅನುಮಾನಗೊಂಡು ಬ್ಯಾಂಕ್ ಸಿಬ್ಬಂದಿ ಚಿನ್ನವನ್ನು ಪರಿಶೀಲಿಸಿದ ವೇಳೆ ಅಡವಿಟ್ಟ ಚಿನ್ನವೆಲ್ಲವೂ ನಕಲಿ ಎಂಬುದು ಗೊತ್ತಾಗಿದೆ. ಈ ಘಟನೆಯ ಬಗ್ಗೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಪೊಲೀಸರು ಕರಮಲ ಬಾಲರವೀಂದ್ರನಾಥ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!