ಪುತ್ತೂರು: ಅಶೋಕ್ ಕುಮಾರ್ ರೈ ಹೆಸರೇ ಗೆಲುವಿನ ಸೂಚನೆಯನ್ನು ತೋರ್ಪಡಿಸಿದೆ.
ನಾಮಪತ್ರ ಹಿಂದೆಗೆದುಕೊಳ್ಳಲು ಸೋಮವಾರ ಕೊನೆ ದಿನವಾಗಿತ್ತು. ನಾಮಪತ್ರ ವಾಪಾಸ್ ಬಳಿಕ ಸಹಾಯಕ ಆಯುಕ್ತರ ಕಚೇರಿ ಹೊರಗಿನ ನೊಟೀಸ್ ಬೋರ್ಡಿನಲ್ಲಿ ನಾಮಪತ್ರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಅಶೋಕ್ ಕುಮಾರ್ ರೈ ಅವರ ಹೆಸರು ಮೊದಲನೆಯವರಾಗಿ ಕಾಣಿಸಿಕೊಂಡಿದೆ.
ಒಟ್ಟು 8 ಅಭ್ಯರ್ಥಿಗಳ ಹೆಸರು ಕಣದಲ್ಲಿ ಅಂತಿಮಗೊಂಡಿದೆ. ಈ 8 ಅಭ್ಯರ್ಥಿಗಳ ಹೆಸರಿನಲ್ಲಿ ಅಶೋಕ್ ಕುಮಾರ್ ರೈ ಮೊದಲನೆಯವರು. ಬಳಿಕ ಬಿಜೆಪಿಯ ಆಶಾ ತಿಮ್ಮಪ್ಪ, ನಂತರ ಜೆ.ಡಿ.ಎಸ್.ನ ದಿವ್ಯಪ್ರಭಾ ಚಿಲ್ತಡ್ಕ, ನಾಲ್ಕನೆಯವರಾಗಿ ಆಮ್ ಆದ್ಮಯ ಬಿ.ಕೆ. ವಿಶು ಕುಮಾರ್ ಕಾಣಿಸಿಕೊಂಡಿದ್ದಾರೆ. ಇವಿಷ್ಟು ನೋಂದಾಯಿತ ರಾಷ್ಟ್ರೀಯ ಪಕ್ಷಗಳು.
ಮಾನ್ಯತೆ ಪಡೆದ ಪಕ್ಷಗಳನ್ನು ಹೊರತುಪಡಿಸಿದ ಪಟ್ಟಿಯಲ್ಲಿ ಎಸ್.ಡಿ.ಪಿ.ಐ.ನಿಂದ ಇಸ್ಮಾಯಿಲ್ ಶಾಫಿ ಕೆ., ಕರ್ನಾಟಕ ರಾಷ್ಟ್ರ ಸಮಿತಿಯಿಂದ ಐವನ್ ಫೆರಾವೊ ಪಿ. ನಾಮಪತ್ರ ಅಧಿಕೃತಗೊಂಡಿದೆ.
ಪಕ್ಷೇತರ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ, ಸುಂದರ ಕೊಯಿಲ ಹೆಸರು ಇದೆ.