Friday, May 17, 2024
spot_imgspot_img
spot_imgspot_img

ನಿರಂಜನ್ ರೈ ಕುರ್ಲೆತ್ತಿಮಾರ್ ಮಾಲಕತ್ವದ “ದೋಸ ಕಾರ್ನರ್” ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

- Advertisement -G L Acharya panikkar
- Advertisement -

ಪುತ್ತೂರಿನ ಆಹಾರ ಪ್ರಿಯರಿಗೆ ಗುಡ್‌ನ್ಯೂಸ್! ಇನ್ನು ಮುಂದೆ ನೀವೂ ಸವಿಯಬಹುದು ಬೆಂಗಳೂರು, ಮೈಸೂರಿನಲ್ಲಿ ಸಿಗುವ ವೆರೈಟೀಸ್ ದೋಸೆಗಳು

ಇಂದೇ ಭೇಟಿ ಕೊಡಿ ಪ್ರತಿಷ್ಠಿತ ಜಿ.ಎಲ್ ವನ್ ಮಾಲ್‌ನ ಎರಡನೇ ಮಹಡಿಯಲ್ಲಿರುವ ದೋಸಾ ಕಾರ್ನರ್‌ಗೆ

ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರು, ಮೈಸೂರು ಶೈಲಿಯ ಸುಮಾರು 30 ಕ್ಕೂ ಅಧಿಕ ಬಗೆಯ ರುಚಿಕರ “ದೋಸ ಕಾರ್ನರ್” ಫ್ಯಾಮಿಲಿ ರೆಸ್ಟೋರೆಂಟ್ ಪುತ್ತೂರಿನ ಪ್ರತಿಷ್ಠಿತ ಜಿ ಎಲ್ ವನ್ ಮಾಲ್‌ನಲ್ಲಿ ಶುಭಾರಂಭಗೊಂಡಿತು.

ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ನೂತನ ರೆಸ್ಟೋರೆಂಟ್‌ನ್ನು ಜಿ.ಎಲ್ ಒನ್ ಮಾಲ್ ಮಾಲಕ ಬಲರಾಮ ಆಚಾರ್ಯ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಮಾಲಕ ನಿರಂಜನ್ ರೈಯವರ ಪತ್ನಿ ಮಮತಾ ರೈ, ಹಾಗೂ ಮನೆಯವರು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.

ನಿರಂಜನ್ ರೈ ಕುರ್ಲೆತ್ತಿಮಾರ್ ಮಾಲಕತ್ವದ ಈ ರೆಸ್ಟೋರೆಂಟ್‌ನಲ್ಲಿ ವಿಶೇಷವಾಗಿ ಫ್ಯಾಮಿಲಿ ಸೇರಿಕೊಂಡು ಸವಿಯಬಹುದಾದ ಫ್ಯಾಮಿಲಿ ದೋಸ, ಮಸಾಲ ದೋಸೆ, ಎ3 ಮಸಾಲ ದೋಸೆ, ಓಪನ್ ದೋಸೆ, ಕ್ಯಾರೆಟ್ ದೋಸೆ, ಪನ್ನೀರ್ ಮಸಾಲೆ ದೋಸೆ ಸೇರಿದಂತೆ ಸುಮಾರು 30ಕ್ಕೂ ಅಧಿಕ ಬಗೆಯ ಸ್ವಚ್ಛ ಹಾಗೂ ಸ್ವಾದಿಷ್ಟಕರವಾದ ದೋಸೆಗಳು, ಇಡ್ಲಿಯಲ್ಲಿ ವಿಶೇಷವಾಗಿ ತಟ್ಟೆ ಇಡ್ಲಿ, ಪೋಡಿ ಇಡ್ಲಿ, ಗೀ ಇಡ್ಲಿ, ಹಾಗೂ ರವ ಇಡ್ಲಿ, ಪರೋಟ, ಕೊತು ಪರೋಟ, ಚಿಲ್ಲಿ ಪರೋಟ, ಪೇಪರ್ ಪರೋಟ, ಇಲ್ಲಿನ ವಿಶೇಷತೆಯಾಗಿದೆ.

ಇದಲ್ಲದೆ ಚಹಾದಲ್ಲಿ ವಿವಿಧ ವೆರೈಟಿಗಳಲ್ಲಿ ಲಭ್ಯ ಇದ್ದು ರೋಸ್ ಟೀ, ಸ್ಟಾಬರೀ ಟೀ, ಚಾಕಲೇಟ್ ಟೀ, ಬನಾನ ಟೀ, ತುಳಸಿ ಟೀ, ಬ್ಲೂ ಟೀ, ಪೀಚ್ ಟೀ, ಲೆಮೆನ್ ಟೀಗಳನ್ನು ಸವಿಯಬಹುದಾಗಿದೆ. ಇದರ ಜೊತೆಗೆ ರೈಸ್ ಬಾತ್‌ಗಳು, ಚಾಕಲೇಟ್ ಸೇರಿದಂತೆ ಎಲ್ಲಾ ಬಗೆ ವಿವಿಧ ರುಚಿಕರವಾದ ಆಹಾರ ಪದಾರ್ಥಗಳನ್ನು ಸವಿಯಬಹುದಾಗಿದೆ. ದೂರದ ಬೆಂಗಳೂರು ಮೈಸೂರಿನಲ್ಲಿ ಸವಿಯಬಹುದಾದ ವಿವಿಧ ಬಗೆಯ ದೋಸೆಗಳನ್ನು ಇನ್ನು ಮುಂದೆ ಪುತ್ತೂರಿನಲ್ಲಿ ಸವಿಯಬಹುದೆಂದು ಆಹಾರ ಪ್ರಿಯರು ಸಂತಸ ವ್ಯಕ್ತಪಡಿಸಿದರು.

- Advertisement -

Related news

error: Content is protected !!