Saturday, April 27, 2024
spot_imgspot_img
spot_imgspot_img

ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ನಾಲ್ವರು ನೀರುಪಾಲು!

- Advertisement -G L Acharya panikkar
- Advertisement -
driving

ಬಾಗಲಕೋಟೆ: ನೀರಿನಲ್ಲಿ ಮುಳುಗಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ಹೋಗಿದ್ದ ನಾಲ್ವರು ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಧನ್ನೂರು ಬಳಿ ನಡೆದಿದೆ.

ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿ ನೀರಿನಲ್ಲಿ ಮುಳುಗಿದ್ದರು. ನೀರಲ್ಲಿ ಮುಳುಗಿದ್ದ ಶಿವಪ್ಪನನ್ನು ಹುಡುಕಾಡಲು ಶಿವಪ್ಪ ಅವರ ಪುತ್ರ ಯಮನಪ್ಪ, ಅಳಿಯ ಶರಣಗೌಡ ಸೇರಿದಂತೆ ಹಲವರು ಬೋಟ್ ನಲ್ಲಿ ಡ್ಯಾಂ ಹಿನ್ನೀರಿಗೆ ತೆರಳಿದ್ದಾರೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮತ್ತೊಂದು ಅವಘಡ ಸಂಭವಿಸಿದೆ.

ನೀರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಶಿವಪ್ಪ ಪುತ್ರ, ಅಳಿಯ ಹಾಗೂ ಬೋಟ್ ಆಪರೇಟರ್ ಪರಶುರಾಮ್ ಮೂವರು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಮುಳುಗಿದ್ದ ಶಿವಪ್ಪ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೋಟ್ ನಲ್ಲಿ ತೆರಳಿದ್ದ ಇನ್ನುಳಿದವರು ಈಜಿ ದಡ ಸೇರಿದ್ದಾರೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!