- Advertisement -
- Advertisement -
ವಿಟ್ಲ: ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ರೂ 1.63 ಕೋಟಿಯ 6 ನೀರಿನ ಟ್ಯಾಂಕ್ ಗೆ ನೇರಳಕಟ್ಟೆಯ ಭಜನಾ ಮಂದಿರ ದ ಬಳಿ ಜಿ.ಪಂ.ಮಾಜಿ ಸದಸ್ಯೆ ಮಂಜುಳಾ ಮಾದವ ಮಾವೆ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಾಣಿ ಜಿ.ಪಂ ಕ್ಷೇತ್ರಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು 411.72 ಕೋಟಿ ಅನುದಾನ ಮಂಜೂರಾಗಿದ್ದು ಈ ಪೈಕಿ ನೆಟ್ಲಮುಡ್ನೂರು ಗ್ರಾಮದಲ್ಲಿ ರೂ. 1.63 ವೆಚ್ಚದಲ್ಲಿ 6 ಟ್ಯಾಂಕ್ ಗಳು ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಸದಸ್ಯ ಮಾದವ ಮಾವೆ, ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ ಸತೀಶ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ ಪೂಜಾರಿ, ಸದಸ್ಯರುಗಳಾದ ಲತೀಫ್ ನೇರಳಕಟ್ಟೆ, ಅಶೋಕ ರೈ, ಜಯಂತಿ ಪೂಜಾರಿ, ಶಾಲಿನಿ ಹರೀಶ್, ಮಾಜಿ ಸದಸ್ಯ ಡಿ.ತನಿಯಪ್ಪ ಗೌಡ ಹಾಗೂ ಹರೀಶ ಅಲಂಗಾಜೆ ಮೊದಲಾದವರು ಭಾಗವಹಿಸಿದ್ದರು.
- Advertisement -