Saturday, April 20, 2024
spot_imgspot_img
spot_imgspot_img

ನೆಲ್ಯಾಡಿ: ಅಕ್ರಮ ಮತಾಂತರ ಕೇಂದ್ರದಲ್ಲಿ 60ಕ್ಕೂ ಅಧಿಕ ಹಿಂದೂಗಳ ಮತಾಂತರಕ್ಕೆ ಯತ್ನದ ಶಂಕೆ; ಪೊಲೀಸ್ ರೈಡ್‌

- Advertisement -G L Acharya panikkar
- Advertisement -

ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಲದಲ್ಲಿ ಮೋರ್ಯ ಧ್ಯಾನ ಮಂದಿರ ಹೆಸರಿನಲ್ಲಿ ಮತಾಂತರ ದಂಧೆ ನಡೆಯುತ್ತಿದೆ. ಅಕ್ರಮ ಅನಧಿಕೃತ ಕಟ್ಟಡದಲ್ಲಿ ಅಮಾಯಕ ಹಿಂದೂಗಳ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಿಂದೂ ಜಾಗರಣಾ ವೇದಿಕೆ ನಿಡಿದ ದೂರಿನನ್ವಯ ಘಟನಾ ಸ್ಥಳ‌ಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಶಿಕಾರಿಪುರ ಮೂಲದ ಹಿಂದೂಗಳ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಿಂದೂಗಳನ್ನು ಕರೆತಂದು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿದೆ.

ಘಟನೆಯ ಕುರಿತು ಹಿಂ.ಜಾ.ವೇ. ಮುಖಂಡ ರವಿಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಭೇಟಿ ನೀಡಿ ಈ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!